alex Certify BIG NEWS: ನಿಮಗೆ ಮಾನ ಮರ್ಯಾದೆ ಬೇಡವೇ…? ಅಧಿಕಾರಿಗಳ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿಮಗೆ ಮಾನ ಮರ್ಯಾದೆ ಬೇಡವೇ…? ಅಧಿಕಾರಿಗಳ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

ಮಂಡ್ಯ: ಮಂಡ್ಯ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಸರ್ವೆ ಇಲಾಖೆ ಸೂಪರ್ ವೈಸರ್ ನ್ನು ತರಾಟೆಗೆ ತೆಗೆದುಕೊಂಡ ಶಾಸಕ ರವೀಂದ್ರ ಶ್ರೀಕಂಠಯ್ಯ, ಸರ್ಕಾರದ ಸಂಬಳ ಪಡೆದುಕೊಳ್ಳುತ್ತಿದ್ದೀರಿ, ನಿಮಗೆ ಸ್ವಲ್ಪನಾದರೂ ಮಾನ ಮರ್ಯಾದೆ ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಪರ್ ವೈಸರ್ ಹಾಗೂ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಇರುವ ದಾಖಲೆಗಳನ್ನು ಕಳೆದುಕೊಂಡಿದ್ದೀರಿ…..ಜನರು ಕೇಳಿದರೆ ಸುಲಿಗೆ ಮಾಡುತ್ತಿದ್ದೀರಾ…..ಇನ್ನು ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ? ಸಿಬ್ಬಂದಿಗಳನ್ನು ದರೋಡೆ ಮಾಡಲು ಬಿಟ್ಟಿದ್ದೀರಾ ? ಅಧಿಕಾರಿಗಳು ತಾಲೂಕು ಕಚೇರಿಗಳಿಗೆ ಬರದೇ ಕೇಂದ್ರ ಕಚೇರಿಯಲ್ಲಿಯೇ ಕುಳಿತು ಮಾಡುತ್ತಿರುವುದಾದರೂ ಏನು ? ಒಮ್ಮೆಯಾದರೂ ತಾಲೂಕು ಕಚೇರಿಗಳಿಗೆ ಭೇಟಿ ನೀಡಿದ್ದೀರಾ ? ಎಂದು ವಾಗ್ದಾಳಿ ನಡೆಸಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ವಿಷ್ಣುಪ್ರಿಯ’ ಚಿತ್ರದ ಮೊದಲ ಹಾಡು

ಇದೇ ವೇಳೆ ಶೌಚಾಲಯ ವಿಚಾರವಾಗಿಯೂ ಗರಂ ಆದ ಶ್ರೀಕಂಠಯ್ಯ, ಸಾರ್ವಜನಿಕರಿಗಾಗಿ ಶೌಚಾಲಯ ನಿರ್ಮಿಸಿದರೆ ಅದಕ್ಕೆ ಬೀಗ ಹಾಕಿ ಇಡಲಾಗಿದೆ. ಈ ರೀತಿ ಮಾಡಿದರೆ ಏನರ್ಥ ? ಶೌಚಾಲಯಗಳನ್ನು ಈಗ ತೆರೆದಿಟ್ಟರೆ ಸಾಲದು ಸ್ವಚ್ಛವಾಗಿಟ್ಟಿರಬೇಕು ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...