alex Certify BIG NEWS: ದೆವ್ವದ ಜೊತೆ ಯಾರಾದ್ರೂ ಆಣೆ, ಪ್ರಮಾಣ ಮಾಡ್ತಾರಾ…..? ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದ ಶಾಸಕ ರವೀಂದ್ರಶ್ರೀಕಂಠಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೆವ್ವದ ಜೊತೆ ಯಾರಾದ್ರೂ ಆಣೆ, ಪ್ರಮಾಣ ಮಾಡ್ತಾರಾ…..? ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದ ಶಾಸಕ ರವೀಂದ್ರಶ್ರೀಕಂಠಯ್ಯ

ಮಂಡ್ಯ: ಜೆಡಿಎಸ್ ನ ಎಲ್ಲಾ ಶಾಸಕರು ಮೇಲುಕೋಟೆಗೆ ಬಂದು ಆಣೆ-ಪ್ರಮಾಣ ಮಾಡಲಿ ಎಂಬ ಸಂಸದೆ ಸುಮಲತಾ ಅವರ ಪಂಥಾಹ್ವಾನಕ್ಕೆ ಕಿಡಿ ಕಾರಿರುವ ಶಾಸಕ ರವೀಂದ್ರಶ್ರೀಕಂಠಯ್ಯ, ಭೂತದ ಬಾಯಲ್ಲಿ ಭಗವದ್ಗೀತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಶಾಸಕರು, ದೆವ್ವದ ಜೊತೆ ಯಾರಾದರೂ ಆಣೆ, ಪ್ರಮಾಣಕ್ಕೆ ಹೋಗ್ತಾರಾ? ಸಂಸದೆ ಮಾತು ಕೇಳಿದ್ರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಅವರ್ಯಾರೋ ಕರೆದರೆ ಆಣೆ, ಪ್ರಮಾಣ ಮಾಡಲು ಆಗುತ್ತಾ? ನಮಗೆ ದೇವರ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಸಂಸದೆ ಸುಮಲತಾ ಮೊದಲು ರಾಷ್ಟ್ರೀಯ ಹೆದ್ದಾರಿ ಡೀಲ್ ಬಗ್ಗೆ ಹೇಳಲಿ. ತಮ್ಮವರನ್ನು ಏಟ್ರಿಯಾ ಹೋಟೆಲ್ ಗೆ ಏಕೆ ಕಳುಹಿಸಿದ್ರು? ಹೇಳಲಿ. ಆಗ ಯಾರು ಸತ್ಯವಂತರು ಎಂಬುದು ಗೊತ್ತಾಗುತ್ತೆ. ಸಂಸದರ ಜೊತೆ ಇರುವವರು ರೈತರ ಹೆಸರಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಹೊಡೆಯುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಹಣ ಮಾಡಿಕೊಂಡ ದೊಡ್ಡ ಗ್ಯಾಂಗ್ ಇದೆ. ಇದನ್ನೆಲ್ಲ ಬಿಟ್ಟು ಸಂಸದರು ನಮ್ಮ ಶಾಸಕರ ಬಗ್ಗೆ ಮಾತಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...