alex Certify BIG NEWS: ‘ಜೀ’ ಹುಜೂರ್ ಎನ್ನುತ್ತಿದ್ದ ರಾಜ್ಯ ಬಿಜೆಪಿ, ಇದೀಗ ಯಡಿಯೂರಪ್ಪನವರನ್ನು ’ದುರಂತ ನಾಯಕ’ನನ್ನಾಗಿಸಿದೆ; ವ್ಯಂಗ್ಯವಾಡಿದ ಕಾಂಗ್ರೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಜೀ’ ಹುಜೂರ್ ಎನ್ನುತ್ತಿದ್ದ ರಾಜ್ಯ ಬಿಜೆಪಿ, ಇದೀಗ ಯಡಿಯೂರಪ್ಪನವರನ್ನು ’ದುರಂತ ನಾಯಕ’ನನ್ನಾಗಿಸಿದೆ; ವ್ಯಂಗ್ಯವಾಡಿದ ಕಾಂಗ್ರೆಸ್

ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ ಧೋರಣೆ ವಿರುದ್ಧ ಕಿಡಿಕಾರಿರುವ ರಾಜ್ಯ ಕಾಂಗ್ರೆಸ್ ಘಟಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ತಂತ್ರಗಾರಿಕೆ ಭಾಗ ಇದು ಎಂದು ಹೇಳಿದೆ.

ಯಡಿಯೂರಪ್ಪನವರನ್ನು ಮೂಲೆಗೆ ಎತ್ತಿ ಬಿಸಾಡುವ ತಂತ್ರಗಾರಿಕೆಯ ಬಾಗವಾಗಿರುವ ‘ಪರಿಷತ್ ಟಿಕೆಟ್’ ಕದನ ಬಿಜೆಪಿಯನ್ನು ಸುಡುತ್ತಿದೆ. ಬಿಜೆಪಿಯದ್ದು ಮಹಿಳಾ ಮನ್ನಣೆ ಅಲ್ಲ, BSY ಮುಕ್ತ BJP ಯ ಚಿತಾವಣೆ ಅಷ್ಟೇ. ‘ಜೀ’ ಹುಜೂರ್ ಎನ್ನುತ್ತಿರುವ ರಾಜ್ಯ ಬಿಜೆಪಿ, ಯಡಿಯೂರಪ್ಪನವರನ್ನು ‘ದುರಂತ ನಾಯಕ’ನನ್ನಾಗಿಸಿದೆ. ಮಹಿಳಾ ವಿರೋಧಿ ಬಿಜೆಪಿ ಎಂದು ಟೀಕಿಸಿದೆ.

ರಾಜಕೀಯ ಕುಹುಕಗಳಿಗೆ ಹಿಂದೂ ದೇವತೆಗಳನ್ನು ಬಳಸಿಕೊಂಡಿರುವ ಬಿಜೆಪಿಯ ಅಸಲಿ ಹಿಂದೂ ವಿರೋಧಿ ಧೋರಣೆ ಬಯಲಾಗಿದೆ, ನಳೀನ್ ಕುಮಾರ್ ಕಟೀಲ್ ರಾಜ್ಯದ ಜನರ ಮುಂದೆ ಮಂಡಿಯೂರಿ ಕ್ಷಮೆ ಕೇಳಬೇಕು. ಧಾರ್ಮಿಕತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಲ್ಲದೆ ದೇವತೆಗಳ ಹೆಸರಲ್ಲಿ ಕೀಳು ಟೀಕೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...