alex Certify BIG NEWS: ಜೀವವಿರುವವರೆಗೂ ಗುಲಾಮರಾಗಿ ಇರ್ತೀವಿ ಎಂದ ಶಾಸಕ ರಾಜುಗೌಡ; ವೇದಿಕೆ ಮೇಲೆಯೇ ಬುದ್ಧಿ ಹೇಳಿದ ಸಿಎಂ ಬೊಮ್ಮಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜೀವವಿರುವವರೆಗೂ ಗುಲಾಮರಾಗಿ ಇರ್ತೀವಿ ಎಂದ ಶಾಸಕ ರಾಜುಗೌಡ; ವೇದಿಕೆ ಮೇಲೆಯೇ ಬುದ್ಧಿ ಹೇಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ದಕ್ಕೆ ಹಾಗೂ ಮೀಸಲಾತಿ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಗಂಡುಗಲಿ. ಅವರಿಗೆ ಜೀವನಪರ್ಯಂತ ಗುಲಾಮರಾಗಿರುವುದಾಗಿ ಶಾಸಕ ರಾಜುಗೌಡ ಹೇಳಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾತನಾಡಿದ ರಾಜುಗೌಡ, ಇದು ಜೀವನದಲ್ಲಿ ಮರೆಯಲಾಗದ ಕ್ಷಣ. 77 ವರ್ಷಗಳ ಬಳಿಕ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿರುವುದು ಐತಿಹಾಸಿಕ ನಿರ್ಧಾರ. ಇಂತಹ ಘೋಷಣೆ ಮಾಡಲು ಎರಡು ಗುಂಡಿಗೆ ಇರಬೇಕು. ಅಂತಹ ಗುಂಡಿಗೆ ನಮ್ಮ ಸಿಎಂ ಬೊಮ್ಮಾಯಿ ಅಣ್ಣನವರಿಗಿದೆ. ಈ ಜೀವವಿರುವವರೆಗೂ ಗುಲಾಮರಾಗಿ ಇರ್ತೀವಿ ಎಂದು ವೇದಿಕೆಯ ಮೇಲೆಯೇ ಸಾಷ್ಟಾಂಗ ನಮಸ್ಕಾರ ಮಾಡಿದರು.

ಶಾಸಕ ರಾಜುಗೌಡ ಹೇಳಿಕೆಗೆ ಗರಂ ಆದ ಸಿಎಂ ಬೊಮ್ಮಾಯಿ, ವೇದಿಕೆ ಮೆಲೆಯೇ ಬುದ್ಧಿವಾದ ಹೇಳಿದರು. ಜೀವನದಲ್ಲಿ ಯಾರೂ ಯಾರಿಗೂ ಗುಲಾಮರಾಗಿರುವ ಅವಶ್ಯಕತೆ ಇಲ್ಲ. ಹಾಗೆ ಗುಲಾಮನಾಗಿರಬೇಕು ಎಂದರೆ ನಿನಗೆ ಬದುಕು ಕೊಟ್ಟ ದೇವರಿಗೆ ಗುಲಾಮನಾಗಿರಿ. ಭೂಮಿ ಮೇಲೆ ಇರುವ ಜನರು ಯಾರಿಗೆ ಯಾರೂ ಗುಲಾಮರಾಗಬೇಕಿಲ್ಲ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...