alex Certify BIG NEWS: ಕ್ಷುಲ್ಲಕ ಕಾರಣಕ್ಕೆ ಗಲಾಟೆ; ಮೂವರ ಮೇಲೆ ಕಾರು ಹತ್ತಿಸಿದ ತಂದೆ-ಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕ್ಷುಲ್ಲಕ ಕಾರಣಕ್ಕೆ ಗಲಾಟೆ; ಮೂವರ ಮೇಲೆ ಕಾರು ಹತ್ತಿಸಿದ ತಂದೆ-ಮಗ

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿ ತಂದೆ ಹಾಗೂ ಮಗ ಇಬ್ಬರೂ ಮೂವರ ಮೇಲೆ ಕಾರು ಹತ್ತಿಸಿರುವ ಘಟನೆ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ನಡೆದಿದೆ.

ಪ್ರಜ್ವಲ್, ರಾಹುಲ್ ಹಾಗೂ ಆನಂದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ದರ್ಶನ್ ಎಂಬಾತ ಮೂವರ ಮೇಲೆ ಕಾರು ಹತ್ತಿಸಿದ್ದು, ಮಗನ ಕೃತ್ಯಕ್ಕೆ ಸ್ವತಃ ತಂದೆಯೇ ಸಾಥ್ ನೀಡಿದ್ದಾರೆ.

ಕಾರನ್ನು ಓವರ್ ಟೇಕ್ ಮಾಡಿ ಸಿಗ್ನಲ್ ಜಂಪ್ ಮಾಡಿ ಹೋಗಿದ್ದಕ್ಕೆ ದರ್ಶನ್ ಹಾಗೂ ಆತನ ತಂದೆ ಮೂವರನ್ನು ತಡೆದು ಥಳಿಸಿದ್ದರು. ಬಳಿಕ ಮೂವರ ಮೇಲೆ ಫಾರ್ಚುನರ್ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ.

ಮೂವರ ಸ್ಥಿತಿ ಗಭೀರವಾಗಿದ್ದು, ಕುವೆಂಪುನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ದರ್ಶನ್ ಹಾಗೂ ಆತನ ತಂದೆ ಇಬ್ಬರನ್ನೂ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...