
ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟಕ್ಕೆ ನಲುಗದ ಕ್ಷೇತ್ರಗಳೆ ಇಲ್ಲ. ಅದರಲ್ಲೂ ಕೋವಿಡ್ ವಿರುದ್ಧ ಹೋರಾಟ ನಡೆಸುವ ಮುಂಚೂಣಿ ವಾರಿಯರ್ಸ್ ಗಳಾದ ವೈದ್ಯರುಗಳೇ ಅತಿಹೆಚ್ಚು ಸಂಖ್ಯೆಯಲ್ಲಿ ಮಹಾಮಾರಿಗೆ ಬಲಿಯಾಗಿರುವುದು ಆಘಾತವನ್ನುಂಟುಮಾಡಿದೆ.
ಪ್ರಕೃತಿಪ್ರಿಯರ ಹುಚ್ಚು ಹಿಡಿಸುತ್ತಿದೆ ಅರುಣಾಚಲ ಸೌಂದರ್ಯ ಸಾರುವ ಫೋಟೋ
ಕೊರೊನಾ ಎರಡನೇ ಅಲೆಯಲ್ಲಿ ದೇಶದಲ್ಲಿ 646 ವೈದ್ಯರು ಸೋಂಕಿನಿಂದ ಸಾವನ್ನಪ್ಪಿದ್ದು, ಅದರಲ್ಲಿ ಅತಿಹೆಚ್ಚು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಮೃತಪಟ್ಟವರಾಗಿದ್ದಾರೆ. ದೆಹಲಿಯಲ್ಲಿ ಈವರೆಗೆ ಬರೋಬ್ಬರಿ 109 ವೈದ್ಯರು ಸಾವನ್ನಪ್ಪಿದ್ದಾರೆ.
ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಲಾಕ್ ಡೌನ್ ತೆರವಾಗ್ತಿದ್ದಂತೆ ಟಿಕೆಟ್ ದರ ಹೆಚ್ಚಳ ಸಾಧ್ಯತೆ
ಬಿಹಾರದಲ್ಲಿ 97 ವೈದ್ಯರು, ಉತ್ತರ ಪ್ರದೇಶದಲ್ಲಿ 79, ಕರ್ನಾಟಕದಲ್ಲಿ 9, ಕೇರಳದಲ್ಲಿ 5 ವೈದ್ಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಾಹಿತಿ ನೀಡಿದೆ.