alex Certify BIG NEWS: ಕಾಂಗ್ರೆಸ್ ನವರು ಯಾವ ಅಭಿಯಾನ ಬೇಕಾದ್ರೂ ಮಾಡಲಿ; ಕೊನೆಗೆ ಸತ್ಯಕ್ಕೆ ಮಾತ್ರ ಜಯ ಸಿಗಲಿದೆ; ಕೈ ನಾಯಕರಿಗೆ ಕೌಂಟರ್ ನೀಡಿದ ಸಿಎಂ ಬೊಮ್ಮಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ನವರು ಯಾವ ಅಭಿಯಾನ ಬೇಕಾದ್ರೂ ಮಾಡಲಿ; ಕೊನೆಗೆ ಸತ್ಯಕ್ಕೆ ಮಾತ್ರ ಜಯ ಸಿಗಲಿದೆ; ಕೈ ನಾಯಕರಿಗೆ ಕೌಂಟರ್ ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ನಾಯಕರ ಪೇಸಿಎಂ ಪೋಸ್ಟರ್ ಅಭಿಯಾನದ ಬಗ್ಗೆ ಕಿಡಿಕಾರಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನವರು ಯಾವ ಕ್ಯಾಂಪೇನ್ ಬೇಕಾದ್ರೂ ಮಾಡಲಿ. ಕೊನೆಗೆ ಸತ್ಯಕ್ಕೆ ಜಯ ಸಿಗಲಿದೆ ಎಂದು ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, 40% ಕಮಿಷನ್ ಬಗ್ಗೆ ಸರ್ಕಾರ ಮುಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ದೂರು ನೀಡಿದರೆ ನಾವು ನಾಳೆಯೇ ತನಿಖೆಗೆ ಸಿದ್ಧ. ಯಾವುದೇ ಒಂದು ದಾಖಲೆಗಳೂ ಇಲ್ಲದೇ ಸುಮ್ಮನೇ ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಇಂತಹ ಪುರಾವೆಗಳಿಲ್ಲದ ಆರೋಪ ಹೆಚ್ಚು ಕಾಲ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪೇಸಿಎಂ ಅಭಿಯಾನ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರು ಯಾವ ಅಭಿಯಾನ ಬೇಕಾದ್ರೂ ಮಾಡಲಿ. ಗೆಲ್ಲುವುದು ಮಾತ್ರ ಸತ್ಯ. ಸರ್ಕಾರದಲ್ಲಿ ಯಾವ ಭ್ರಷ್ಟಾಚಾರವೂ ನಡೆದಿಲ್ಲ. ಭ್ರಷ್ಟಾಚಾರದ ಬಗ್ಗೆ ಪುರಾವೆ ನೀಡಲಿ ತನಿಖೆಗೆ ಸಿದ್ಧ. ಸುಮ್ಮನೇ ಆರೋಪಗಳನ್ನು ಮಾಡಿ ಹೋಗುವುದು ಬೇಡ. ದಾಖಲೆಗಳನ್ನು ಕೊಡಲಿ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...