alex Certify BIG NEWS: ಉರಿಗೌಡ, ನಂಜೇಗೌಡ ಚರ್ಚೆ ವಿಚಾರ; ಇದು ಕಾಲ್ಪನಿಕ ಕಥೆಯಲ್ಲ; ನಿರ್ಮಲಾನಂದ ಶ್ರೀಗಳಿಗೆ ಮನವರಿಕೆ ಮಾಡುತ್ತೇವೆ ಎಂದ ಸಿ.ಟಿ.ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉರಿಗೌಡ, ನಂಜೇಗೌಡ ಚರ್ಚೆ ವಿಚಾರ; ಇದು ಕಾಲ್ಪನಿಕ ಕಥೆಯಲ್ಲ; ನಿರ್ಮಲಾನಂದ ಶ್ರೀಗಳಿಗೆ ಮನವರಿಕೆ ಮಾಡುತ್ತೇವೆ ಎಂದ ಸಿ.ಟಿ.ರವಿ

ತುಮಕೂರು: ಉರಿಗೌಡ, ನಂಜೇಗೌಡ ವಿಚಾರ ಪ್ರಸ್ತಾಪಿಸದಂತೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೂಚಿಸಿದ್ದರೂ ಸುಮ್ಮನಾಗದ ಬಿಜೆಪಿ ನಾಯಕ ಸಿ.ಟಿ.ರವಿ ಮತ್ತೆ ಕ್ಯಾತೆ ತೆಗೆದಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಉರಿಗೌಡ, ನಂಜೇಗೌಡ ಕಾಲ್ಪನಿಕ ಕಥೆಯಲ್ಲ, ಅವರ ಬಗ್ಗೆ ಜವರೇಗೌಡರು ಸುವರ್ಣ ಮಂಡ್ಯ ಪುಸ್ತಕದಲ್ಲಿ ದಾಖಲಿಸಿದ್ದಾರೆ. ನಿರ್ಮಲಾನಂದನಾಥ ಶ್ರೀಗಳಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

ನಿರ್ಮಲಾನಂದನಾಥ ಶ್ರೀಗಳ ಮಾತನ್ನು ಗೌರವಿಸುತ್ತೇವೆ. ಶ್ರೀಗಳಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುತ್ತೇವೆ. ಶ್ರೀಗಳ ಬಳಿ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತೇವೆ. ಉರಿಗೌಡ, ನಂಜೇಗೌಡ ಹೆಸರಿಗೆ ಇಂದು ನಿನ್ನೆ ಪ್ರಾಮುಖ್ಯತೆ ಬಂದಿದ್ದಲ್ಲ. ಇದು ಕಾಲ್ಪನಿಕ ಪಾತ್ರವೂ ಅಲ್ಲ. ಅವರಿಬ್ಬರೂ ಸುಳ್ಳು ಎಂದು ಹೇಳುವವರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...