alex Certify BIG NEWS: ಇಷ್ಟವಿಲ್ಲವೆಂದರೆ ರಾಜೀನಾಮೆ ಕೊಟ್ಟು ಮನೆಯಲ್ಲಿರಿ; ಯತ್ನಾಳ್ ಗೆ ಬಸವರಾಜ ದಡೇಸುಗೂರು ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಷ್ಟವಿಲ್ಲವೆಂದರೆ ರಾಜೀನಾಮೆ ಕೊಟ್ಟು ಮನೆಯಲ್ಲಿರಿ; ಯತ್ನಾಳ್ ಗೆ ಬಸವರಾಜ ದಡೇಸುಗೂರು ಟಾಂಗ್

ಕೊಪ್ಪಳ: ಸಿಎಂ ಬಿ.ಎಸ್.ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ತಿರುಗೇಟು ನೀಡಿರುವ ಶಾಸಕ ಬಸವರಾಜ ದಡೇಸುಗೂರು, ಪದೇ ಪದೇ ಆರೋಪ ಮಾಡುತ್ತಿರುವ ಬದಲು ಯತ್ನಾಳ್ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ದಡೇಸುಗೂರು, ಇನ್ನೂ ಎರಡು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಇಷ್ಟ ಇಲ್ಲ ಎಂದರೆ ಯತ್ನಾಳ್ ರಾಜೀನಾಮೆ ಕೊಟ್ಟು ಆರಾಮವಾಗಿ ಮನೆಯಲ್ಲಿರಲಿ. ಪದೇ ಪದೇ ಕೀಳುಮಟ್ಟದ ಆರೋಪಗಳು ಸರಿಯಲ್ಲ ಎಂದು ಕಿಡಿಕಾರಿದರು.

ʼಲಾಕ್‌ ಡೌನ್ʼ ಸಡಿಲಿಸುತ್ತಲೇ ಗಿರಿಧಾಮಗಳತ್ತ ದೌಡಾಯಿಸಿದ ಪ್ರವಾಸಿಗರು

ಯಾರೇ ಆಗಲಿ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಬಿ ಎಸ್ ವೈ ಮಗನ ಬಗ್ಗೆ ಮಾತನಾಡುವುದೂ ಸರಿಯಲ್ಲ. ಯಡಿಯೂರಪ್ಪನವರ ಬಗ್ಗೆ ಗೌರವವಿಲ್ಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮತ್ತೆ ಮತ್ತೆ ಆರೋಪಿಸುತ್ತಿರುವ ಬದಲು ರಾಜೀನಾಮೆ ಕೊಡಿ ಎಂಬುದು ಯತ್ನಾಳ್ ಗೆ ನನ್ನ ವಿನಂತಿ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...