alex Certify BIG NEWS: ಅಧಿಕಾರ ಸಿಕ್ಕಿದೆ ಅಂದಾಕ್ಷಣ ನಾವು ತೋಳಗಳಾಗಲ್ಲ; ಸಿದ್ದರಾಮಯ್ಯ ಹೇಳಿಕೆಗೆ ಮತ್ತೆ ಕೌಂಟರ್ ಕೊಟ್ಟ ಸಿಎಂ ಬೊಮ್ಮಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಧಿಕಾರ ಸಿಕ್ಕಿದೆ ಅಂದಾಕ್ಷಣ ನಾವು ತೋಳಗಳಾಗಲ್ಲ; ಸಿದ್ದರಾಮಯ್ಯ ಹೇಳಿಕೆಗೆ ಮತ್ತೆ ಕೌಂಟರ್ ಕೊಟ್ಟ ಸಿಎಂ ಬೊಮ್ಮಾಯಿ

ಬಳ್ಳಾರಿ: ಸಿಎಂ ಬೊಮ್ಮಾಯಿ ಮೋದಿ ಮುಂದೆ ನಾಯಿಮರಿಯಂತೆ ಇರ್ತಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತೆ ಕೌಂಟರ್ ನೀಡಿದ್ದು, ನಾನು ನಿಯತ್ತಿನ ನಾಯಿ…ಕಳ್ಳರನ್ನು ಒಳಗೆ ಬಿಡದ ನಾಯಿ ಎಂದು ಟಾಂಗ್ ನೀಡಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾಯಿ ಮಾಲೀಕನಿಗೆ, ಸಾಕುವವನಿಗೆ ನಿಯತ್ತಾಗಿ ಇರುತ್ತೆ. ಕಳ್ಳತನ ಮಾಡಲು ಬಂದ್ರೆ ನಾಯಿ ಸುಮ್ಮನೆ ಬಿಡಲ್ಲ. ಜನಸೇವೆ ಮಾಡುವ ನಿಯತ್ತಿನ ನಾಯಿ ಎಂದು ತಿಳಿದಿದ್ದೇನೆ ಎಂದು ಹೇಳಿದ್ದಾರೆ.

ನಮಗೆ ಅಧಿಕಾರ ಸಿಕ್ಕಿದೆ ಅಂದ ತಕ್ಷಣ ತೋಳಗಳು ಆಗಲ್ಲ, ಜನರನ್ನು ತಿನ್ನುವ ನಾಯಿವೇಷದ ತೋಳಗಳು ಇವೆ. ಜನರಿಗೆ ಗೊತ್ತು ಯಾರು ನಾಯಿ? ಯಾರು ತೋಳ ಅಂತಾ. ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...