alex Certify BIG NEWS: ಮೋದಿ ನಂತ್ರ ಪಂಜಾಬ್ ನಲ್ಲಿ ಮತ್ತೊಂದು ದೊಡ್ಡ ಭದ್ರತಾ ಲೋಪ; ರಾಹುಲ್ ಮುಖಕ್ಕೆ ಬಾವುಟ ಎಸೆತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೋದಿ ನಂತ್ರ ಪಂಜಾಬ್ ನಲ್ಲಿ ಮತ್ತೊಂದು ದೊಡ್ಡ ಭದ್ರತಾ ಲೋಪ; ರಾಹುಲ್ ಮುಖಕ್ಕೆ ಬಾವುಟ ಎಸೆತ

 ನವದೆಹಲಿ: ಪಂಜಾಬ್‌ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭದ್ರತೆಯಲ್ಲಿ ದೊಡ್ಡ ಲೋಪ ಉಂಟಾಗಿದೆ. ವ್ಯಕ್ತಿಯೊಬ್ಬರು ಅವರ ಕಾರ್ ಗೆ ಧ್ವಜ ಎಸೆದಿದ್ದು, ಅದು ಮುಖಕ್ಕೆ ತಾಗಿದೆ.

ಇಂದು ಪಂಜಾಬ್‌ ನ ಲೂಧಿಯಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಖಕ್ಕೆ ಧ್ವಜವನ್ನು ಎಸೆದಿದ್ದು, ಭದ್ರತಾ ಲೋಪ ಉಂಟಾಗಿದೆ. ರಾಹುಲ್ ಗಾಂಧಿ ಅವರ ಮುಖಕ್ಕೆ ಧ್ವಜ ತಾಗಿದೆ.

ರಾಹುಲ್ ಗಾಂಧಿ ಕುಳಿತಿದ್ದ ಕಾರನ್ನು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸುನಿಲ್ ಜಾಖಡ್ ಓಡಿಸುತ್ತಿದ್ದರೆ, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಿಂದಿನ ಸೀಟುಗಳಲ್ಲಿ ಕುಳಿತಿದ್ದರು. ರಸ್ತೆಯಲ್ಲಿ ದೂರದಲ್ಲಿದ್ದ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿ ಅವರ ಕಿಟಕಿಯ ಮೇಲೆ ಬಹಳ ದೂರದಿಂದ ಧ್ವಜವನ್ನು ಎಸೆಯುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ಗಾಂಧಿ ಕಾರ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು ಮತ್ತು ಬೆಂಬಲಿಗರತ್ತ ಕೈ ಬೀಸಲು ಅವರ ಕಿಟಕಿ ತೆರೆದಿತ್ತು.

ಪಂಜಾಬ್‌ ನಲ್ಲಿ ಇದು ಎರಡನೇ ಭದ್ರತಾ ಲೋಪವಾಗಿದೆ. ಕೆಲವು ದಿನಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ 20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಾಗ ಭದ್ರತಾ ಲೋಪ ಉಂಟಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...