alex Certify BIG BREAKING: ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ತಿರುವು; ಠುಸ್ ಆಯ್ತಾ ಇಂದ್ರಜಿತ್ ಲಂಕೇಶ್ ಬಾಂಬ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ತಿರುವು; ಠುಸ್ ಆಯ್ತಾ ಇಂದ್ರಜಿತ್ ಲಂಕೇಶ್ ಬಾಂಬ್…!

ಮೈಸೂರು: ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಿಬ್ಬಂದಿಯೇ ಸ್ಪಷ್ಟನೆ ನೀಡಿದ್ದು, ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ.

ದರ್ಶನ್ ರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಮೈಸೂರಿನ ಸಂದೇಶ್ ಹೋಟೇಲ್ ಸಿಬ್ಬಂದಿ ಗಂಗಾಧರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆ ದಿನ ದರ್ಶನ್ ರ್ಯಾಶ್ ಆಗಿ ಮಾತನಾಡಿದ್ದರು ಹೊರತು ಹಲ್ಲೆ ನಡೆಸಿಲ್ಲ. ಊಟ ನೀಡಲು ಸ್ವಲ್ಪ ತಡವಾಗಿತ್ತು. ಅದಕ್ಕೆ ಕೋಪದಿಂದ ಮಾತನಾಡಿದ್ದಾರೆ ಅಷ್ಟೇ ಯಾವುದೇ ಹಲ್ಲೆ ನಡೆಸಿಲ್ಲ ಎಂದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ಕೃಷಿ ಸಚಿವ ಬಿ.ಸಿ. ಪಾಟೀಲ್ ಬ್ಯಾಟಿಂಗ್…!

ನನ್ನ ಕಣ್ಣಿಗೂ ಯಾವುದೇ ಗಾಯಗಳಾಗಿಲ್ಲ, ದೃಷ್ಟಿಯೂ ಸರಿಯಾಗಿದೆ. ಇನ್ನು ನಾನು ದಲಿತ ಸಮುದಾಯದವನಲ್ಲ, ಬ್ರಾಹ್ಮಣ ಸಮುದಾಯದವನು. ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.

ಘಟನೆ ಬಳಿಕ ಯಾರು ಪೊರಕೆ ತಂದರು ಎಂಬುದು ನನಗೆ ಗೊತ್ತಿಲ್ಲ. ಹೋಟೆಲ್ ಬಳಿ ಕಸ ಗುಡಿಸುವವರು ಪೊರಕೆ ತಂದಿರಬಹುದು ಅದನ್ನು ಇಂದ್ರಜಿತ್ ಅವರು ತಪ್ಪಾಗಿ ತಿಳಿದುಕೊಂಡು ಹೇಳಿರಬಹುದು. ನನಗೆ ಯಾವುದೇ ಕುಟುಂಬ ಇಲ್ಲ. ನಾನು ಬ್ಯಾಚುಲರ್. ನನಗೆ ಮದುವೆಯೇ ಆಗಿಲ್ಲ. ಇಂದ್ರಜಿತ್ ಲಂಕೇಶ್ ಮಾಡುತ್ತಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...