alex Certify BIG NEWS: ಬೆಂಗಳೂರಿನ ಹಲವೆಡೆ ಇಂದು ಸಂಜೆಯವರೆಗೂ ಪವರ್ ಕಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನ ಹಲವೆಡೆ ಇಂದು ಸಂಜೆಯವರೆಗೂ ಪವರ್ ಕಟ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆಯಿಂದ ಸಂಜೆಯವರೆಗೂ ಕರೆಂಟ್ ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ನಿಗಮ ತಿಳಿಸಿದೆ.

ಈ ಪ್ರದೇಶಗಳಲ್ಲಿ ವಿದ್ಯುತ್ ಕಟ್:

ಹೆಚ್ ಎಸ್ ಆರ್ ಲೇಔಟ್ ಮತ್ತು ಕೋರಮಂಗಲದ Bwssb Stp, ಜಕ್ಕಸಂದ್ರ, ಹೆಚ್​ಎಸ್​ಆರ್​ 5ನೇ ವಲಯದ ಟೀಚರ್ಸ್​​ ಕಾಲೋನಿ, ವೆಂಕಟಾಪುರದ ಭಾಗ, ಗ್ರೀನೇಜ್ ಅಪಾರ್ಟ್‌ಮೆಂಟ್, ಕೋರಮಂಗಲ ಎಕ್ಸಟೆನ್ಷನ್​ನಲ್ಲಿ ಇಂದು ಬೆಳಗ್ಗೆ 10:00 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್​ ಕಡಿತವಾಗಲಿದೆ.

ಹೆಬ್ಬಾಳ ಮತ್ತು ಜಾಲಹಳ್ಳಿಯ ವಿದ್ಯಾರಣ್ಯಪುರ, ಯಲಹಂಕ ನ್ಯೂ ಓಲ್ಡ್ ಟೌನ್, ಕೆಎಮ್​ಎಫ್​, ಮಾರುತಿ ನಗರ, ಎಂ.ಎಸ್.ಪಾಳ್ಯ, ಎಲ್​&ಟಿ, ಎನ್​ಸಿಬಿಎಸ್​, ಬ್ಯಾಟರಾಯನಪುರ, ಪುರವಂಕರ ಬ್ಲಾಕ್-1,2,3 ಮತ್ತು 4, ಆರ್​ಎಮ್​ಝೆಡ್​​, ಜಿಕೆವಿಕೆ, ಜುಡಿಕಲ್ ಲೇಔಟ್​​ನಲ್ಲಿ ಬೆಳಗ್ಗೆ 10:30 ರಿಂದ ಸಂಜೆ 6:00 ಗಂಟೆವರೆಗೆ ವಿದ್ಯುತ್​ ಇರುವುದಿಲ್ಲ.

ಕೋರಮಂಗಲದ ರಾಜಶ್ರೀ ಲೇಔಟ್, ಗಾಂಧಿನಗರ, ಲಕ್ಷ್ಮಿ ಲೇಔಟ್, ಸಿಲ್ವರ್ ಸ್ಪ್ರಿಂಗ್ ಲೇಔಟ್​​, ಭುವನೇಶ್ವರಿ ಲೇಔಟ್, ಮುನ್ನೇಕೊಳಲ್​ದಲ್ಲಿ ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ವಿದ್ಯುತ್​ ಕಡಿತವಾಗಲಿದೆ. ​  ಜಿಎಂ ಪಾಳ್ಯ ಪೂರ್ಣ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಕರೆಂಟ್​ ಕಟ್​ ಆಗಲಿದೆ.

ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ  http://bescom.karnataka.gov.in ಸಂಪರ್ಕಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...