alex Certify ತಾಯಿ – ಮಗಳು ಆತ್ಮಹತ್ಯೆಗೆ ಶರಣಾಗಿದ್ದರ ಹಿಂದಿನ ಕಾರಣ ಬಹಿರಂಗ; ನಾಯಿ ಸಾಕುವ ವಿಚಾರಕ್ಕಾಗಿ ಸಂಭವಿಸಿದೆ ದುರಂತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ – ಮಗಳು ಆತ್ಮಹತ್ಯೆಗೆ ಶರಣಾಗಿದ್ದರ ಹಿಂದಿನ ಕಾರಣ ಬಹಿರಂಗ; ನಾಯಿ ಸಾಕುವ ವಿಚಾರಕ್ಕಾಗಿ ಸಂಭವಿಸಿದೆ ದುರಂತ ಸಾವು

ಮೂರು ದಿನಗಳ ಹಿಂದೆ ತಾಯಿ – ಮಗಳು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಇದರ ಹಿಂದಿನ ಕಾರಣ ಬಹಿರಂಗವಾಗಿದ್ದು, ಶಾಕ್ ಆಗುವಂತಿದೆ.

ದಿವ್ಯಾ ಎಂಬವರು ತಮ್ಮ ಮಗಳೊಂದಿಗೆ ನೇಣಿಗೆ ಕೊರಳೊಡ್ಡಿದ್ದು, ಪೊಲೀಸರ ತನಿಖೆ ವೇಳೆ ನಾಯಿ ಸಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಅತ್ತೆ ಮತ್ತು ಮಾವನೊಂದಿಗೆ ಜಗಳವಾಡಿದ್ದ ದಿವ್ಯಾ ಬಳಿಕ ಮಗಳೊಂದಿಗೆ ನೇಣು ಹಾಕಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿದೆ.

ದಿವ್ಯಾ ಅವರಿಗೆ ಉಸಿರಾಟದ ಸಮಸ್ಯೆ ಇತ್ತು ಎನ್ನಲಾಗಿದ್ದು, ನಾಯಿ ಮನೆಯಲ್ಲಿ ಇದ್ದರೆ ಗುಣವಾಗುವುದು ಕಷ್ಟ ಎಂದು ವೈದ್ಯರು ಹೇಳಿದ್ದರಂತೆ. ಹೀಗಾಗಿ ತಮ್ಮ ಮನೆಯಲ್ಲಿದ್ದ ನಾಯಿಯನ್ನು ಬೇರೆ ಯಾರಿಗಾದರೂ ಕೊಡೋಣ ಎಂದು ಅತ್ತೆ, ಮಾವನ ಬಳಿ ದಿವ್ಯಾ ಹೇಳಿದ್ದಾರೆ.

ಇದಕ್ಕೆ ಅತ್ತೆ – ಮಾವ ಒಪ್ಪದಾಗ ಅವರೊಂದಿಗೆ ಜಗಳವಾಡಿದ ದಿವ್ಯಾ, ನನ್ನ ಆರೋಗ್ಯದ ಬಗ್ಗೆ ನಿಮಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದಿದ್ದಾರೆ. ಬಳಿಕ ತಮ್ಮ ಮಗಳೊಂದಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Nezabudnuteľná zmrzlinová výzva: len niektorí nájdu 3 prázdne Vyhľadávanie ihly v kopy sena: Nájdi myš za 8 sekúnd: hádanka pre