![](https://kannadadunia.com/wp-content/uploads/2019/06/deadbody.jpeg)
ಬೆಳಗಾವಿ: ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಶವ ನೀಡುವ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದಾರೆ.
ಬೇರೆ ಕುಟುಂಬದವರಿಗೆ ಮೃತವ್ಯಕ್ತಿಯ ಶವ ನೀಡಿದ್ದು, ಇದನ್ನು ತಿಳಿಯದ ಕುಟುಂಬದವರು ತಮಗೆ ನೀಡಲಾದ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮಾರನೇ ದಿನ ಈ ವಿಷಯ ಬೆಳಕಿಗೆ ಬಂದಿದ್ದು, ಆಸ್ಪತ್ರೆ ಸಿಬ್ಬಂದಿ ಅಂತ್ಯಸಂಸ್ಕಾರ ಮಾಡಿ ಹೂತುಹಾಕಿದ ಮೃತದೇಹವನ್ನು ಹೊರ ತೆಗೆದು ನೈಜ ಕುಟುಂಬಕ್ಕೆ ಕೊಟ್ಟಿದ್ದಾರೆ.
ನೀವು ದಾಖಲಿಸಿದ ವ್ಯಕ್ತಿ ಮೃತಪಟ್ಟಿರುವುದಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆ ಸಿಬ್ಬಂದಿ ಕುಟುಂಬದವರಿಗೆ ಮೃತದೇಹ ಕೊಟ್ಟಿದ್ದರು. ದುಃಖದಲ್ಲಿದ್ದ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದ್ದು, ಮಾರನೇ ದಿನ ಹೂತಿದ್ದ ಮೃತದೇಹ ಹೊರ ತೆಗೆದು ನೈಜ ಕುಟುಂಬದವರಿಗೆ ಕೊಡಲಾಗಿದೆ. ಬೆಳಗಾವಿಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಘಟನೆ ನಡೆದಿದೆ.