alex Certify ಮುರುಘಾ ಶರಣರಿಗೆ ಮತ್ತೊಂದು ಬಿಗ್ ಶಾಕ್: ‘ಬಸವಶ್ರೀ ಪ್ರಶಸ್ತಿ’ ವಾಪಸ್ ನೀಡಲು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುರುಘಾ ಶರಣರಿಗೆ ಮತ್ತೊಂದು ಬಿಗ್ ಶಾಕ್: ‘ಬಸವಶ್ರೀ ಪ್ರಶಸ್ತಿ’ ವಾಪಸ್ ನೀಡಲು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ನಿರ್ಧಾರ

ಪೋಕ್ಸೋ ಕೇಸ್ ನಲ್ಲಿ ಶಿವಮೂರ್ತಿ ಮುರುಘಾ ಶರಣರು ಬಂಧಿತರಾದ ಹಿನ್ನೆಲೆಯಲ್ಲಿ ಮುರುಘಾ ಮಠದಿಂದ ನೀಡಲಾಗಿದ್ದ ‘ಬಸವಶ್ರೀ ಪ್ರಶಸ್ತಿ’ಯನ್ನು ವಾಪಸ್ ನೀಡಲು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ನಿರ್ಧರಿಸಿದ್ದಾರೆ.

ಶ್ರೀಗಳು ನೀಡಿದ್ದ ಪ್ರಶಸ್ತಿಯನ್ನು ಹಿಂತಿರುಗಿಸಲಾಗುವುದು ಎಂದು ಸಾಯಿನಾಥ್ ತಿಳಿಸಿದ್ದಾರೆ. 2017 ರಲ್ಲಿ ಪಿ. ಸಾಯಿನಾಥ್ ಅವರಿಗೆ ಮುರುಘಾ ಮಠದಿಂದ ಕೊಡ ಮಾಡುವ ಬಸವಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 2016 ನೇ ಸಾಲಿನ ಪ್ರಶಸ್ತಿ ಪಡೆದುಕೊಂಡಿದ್ದ ಸಾಯಿನಾಥ್ ಅದನ್ನು ವಾಪಸ್ ನೀಡಲಿದ್ದಾರೆ. ಶ್ರೀಗಳ ಬಂಧನ ಹಿನ್ನಲೆಯಲ್ಲಿ ಸಾಯಿನಾಥ್, ಪ್ರಶಸ್ತಿ ಹಾಗೂ ಪ್ರಶಸ್ತಿ ಜೊತೆಗೆ ನೀಡಿದ್ದ 5 ಲಕ್ಷ ರೂ. ವಾಪಸ್ ಕೊಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...