ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ತೀವ್ರವಾಗಿ ನಡೆಯುತ್ತಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಬಳಿಕ ಕಳೆದ 3 ದಿನಗಳಿಂದ ಹೋಟೆಲ್ ಬಂದ್ ಆಗಿದ್ದು, ಮಾ.8 ರಿಂದ ಕೆಫೆ ಪುನರಾರಂಭವಾಗಲಿದೆ. ಶಿವರಾತ್ರಿಯಂದು ಹೋಟೆಲ್ ಪುನರಾರಂಭವಾಗಲಿದೆ ಎಂದು ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ತಿಳಿಸಿದ್ದಾರೆ.
ಶಿವರಾತ್ರಿಯಂದು ಹೋಟೆಲ್ ಪುನರಾರಂಭವಾಗಲಿದೆ. ಇದೊಂದು ಪುನರ್ಜನ್ಮ, ಬಾಂಬ್ ಸ್ಫೋಟ ಪ್ರಕರಣವನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲರೂ ಈ ಕೃತ್ಯ ಖಂಡಿಸಬೇಕು ಎಂದಿದ್ದಾರೆ.