alex Certify ಪ್ರೇಯಸಿ ಮೇಲೆ ಕಣ್ಣಾಕಿದ್ದಕ್ಕೆ ಗೆಳೆಯನ ಮರ್ಮಾಂಗವನ್ನೇ ಕತ್ತರಿಸಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಯಸಿ ಮೇಲೆ ಕಣ್ಣಾಕಿದ್ದಕ್ಕೆ ಗೆಳೆಯನ ಮರ್ಮಾಂಗವನ್ನೇ ಕತ್ತರಿಸಿದ ಯುವಕ

ಮನುಷ್ಯನ ಮನಸ್ಸಲ್ಲಿ ದ್ವೇಷದ ಕಿಚ್ಚು ಹೊತ್ತು ಉರಿತು ಅಂದ್ರೆ ಸಾಕು, ಆತ ಎಂಥಹ ಹೇಸಿಗೆ ಕೆಲಸ ಮಾಡುವುದಕ್ಕೂ ಹೇಸೋಲ್ಲ. ಈಗ ಇಡೀ ದೇಶವೇ ಬೆಚ್ಚಿಬೀಳುವಂತಹ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ. ಯುವಕನೊಬ್ಬ ತನ್ನ 21 ವರ್ಷದ ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದಿದ್ದಾನೆ. ಆ ಘಟನೆ ನಡೆದಿರುವ ಪರಿ ನೋಡ್ತಿದ್ರೆ, ಮನುಷ್ಯ ಎಷ್ಟು ಕ್ರೂರಿ ಅಂತ ಅನ್ನಿಸದೇ ಇರೋಲ್ಲ.

ಪೊಲೀಸರ ಹೇಳಿಕೆ ಪ್ರಕಾರ, ಕೊಲೆಗಾರ ಕೊಲೆ ಮಾಡುವ ಮೊದಲು, ತನ್ನ ಗೆಳೆಯನ ಜೊತೆ ವಾದ-ವಿವಾದ ನಡೆಸಿದ್ದಾನೆ. ಕೊನೆಗೆ ಅದೇ ಜಗಳ-ಗಲಾಟೆ ರೂಪ ಪಡೆದುಕೊಂಡಿದೆ. ಆರೋಪಿ ಕೊಲೆ ಮಾಡುವ ಮೊದಲು ನಿನಗೆ ಈಗಾಗಲೇ 4-5 ಗೆಳೆತಿಯರಿದ್ದಾರೆ, ನನ್ನ ಗೆಳತಿಯನ್ನ ಬಿಟ್ಟು ಬಿಡು ಎಂದು ಹೇಳಿದ್ದಾನೆ’ ಆದರೆ ಆತ ಒಪ್ಪದಿದ್ದಾಗ ಕೊನೆಗೆ ತನ್ನ ಗೆಳೆಯ ಅನ್ನೋದನ್ನೂ ಮರೆತು ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾನೆ. ಆದರೂ ಕೊಲೆಗಾರನಿಗೆ ತೃಪ್ತಿ ಸಿಕ್ಕಿಲ್ಲ. ಕೊನೆಗೆ ಸಿಟ್ಟಿನಲ್ಲೇ ಒಂಬತ್ತು ಬಾರಿ ಚುಚ್ಚಿ-ಚುಚ್ಚಿ ಕೊಂದಿದ್ದಾನೆ.

ಮೃತ ವ್ಯಕ್ತಿಯನ್ನ ಶಮೀಮ್ ಅನ್ಸಾರಿ ಎಂದು ಗುರುತಿಸಲಾಗಿದೆ. ಆರೋಪಿ ಹೆಸರು ಅಸ್ಲಾಂ ಅನ್ಸಾರಿ ಎಂದು ಹೇಳಲಾಗಿದೆ. ಅಸ್ಲಾಂ ಅನ್ಸಾರಿಯ ಗೆಳತಿ ಜೊತೆ ಶಮೀಮ್‌ ಹತ್ತಿರವಾಗುತ್ತಿದ್ದ. ಈ ವಿಷಯ ಗೊತ್ತಾಗುತ್ತಿದ್ದ ಹಾಗೆಯೇ ಅಸ್ಲಾಂ ಅನ್ಸಾರಿ ಹುಚ್ಚನಂತಾಗಿ ಹೋಗಿದ್ದ.

ಅಸಲಿಗೆ ಇವರಿಬ್ಬರೂ ಬಾಲ್ಯ ಸ್ನೇಹಿತರಾಗಿದ್ದರು. ದಿನನಿತ್ಯ ಭೇಟಿಯಾಗುವುದು, ಹೊರಗಡೆ ಸುತ್ತಾಡುವುದಕ್ಕೆ ಹೋಗುವುದು ಕಾಮನ್ ಆಗಿತ್ತು. ಶಮೀಮ್‌ಗೆ 4-5 ಜನ ಗೆಳತಿಯರಿದ್ದರೂ ಅವರ ಬಗ್ಗೆ ಆತ ಎಂದೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ತನ್ನ ಹುಡುಗಿಗೆ ಶಮೀಮ್ ಹತ್ತಿರವಾಗುತ್ತಿದ್ದಾನೆ ಅನ್ನೊದು ಅರಿವಾಗಿತೋ ಆಗಲೇ ಅಸ್ಲಾಂ ವಾರ್ನಿಂಗ್ ಕೊಟ್ಟಿದ್ದ.

ಆದರೆ ಶಮೀಮ್ ಮಾತ್ರ ಅದನ್ನ ತಲೆಗೆ ತೆಗೆದುಕೊಂಡಿರ್ಲಿಲ್ಲ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿನ ಭರದಲ್ಲಿ ಶಮೀಮ್‌ಗೆ ಮರ್ಮಾಂಗವನ್ನೇ ಕತ್ತರಿಸುತ್ತೇನೆ ಎಂದು ಹೇಳಿ ವಾರ್ನಿಂಗ್ ಕೂಡಾ ಕೊಟ್ಟಿದ್ದ. ಆದರೂ ಶಮೀಮ್ ಉಡಾಫೆಯಾಗಿ ಮಾತನಾಡಿದ್ದಾನೆ. ಕೊನೆಗೆ ತಾಳ್ಮೆ ಕಳೆದುಕೊಂಡ ಅಸ್ಲಾಂ, ಶಮೀಮ್ ಕಣ್ಣಿಗೆ ಚಾಕುವಿನಿಂದ ಮೊದಲು ಇರಿದಿದ್ದಾನೆ. ಆ ನಂತರ ಆತನ ಮರ್ಮಾಂಗ ಕತ್ತರಿಸಿದ್ದಾನೆ. ಕೊನೆಗೆ ಪ್ರಜ್ಞೆ ಬಂದ ನಂತರ ಅಲ್ಲಿಂದ ಎಸ್ಕೆಪ್ ಆಗಿದ್ದಾನೆ.

ಅಪರಾಧ ವಿಭಾಗದ ಅಧಿಕಾರಿಯೊಬ್ಬರು, ಬೆಳಿಗ್ಗೆ ಘಟನೆಯ ಬಗ್ಗೆ ನಮಗೆ ತಿಳಿಯಿತು. ಈ ಬಗ್ಗೆ ತನಿಖೆ ನಡೆಸಿದಾಗ ರಾತ್ರಿ ಶಮೀಮ್ ಜತೆ ಅಸ್ಲಾಂ ಇದ್ದದ್ದು ಪತ್ತೆಯಾಗಿದೆ. ತೀವ್ರ ವಿಚಾರಣೆಯ ನಂತರ ಅಸ್ಲಾಂ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...