alex Certify ಆತ್ಮಹತ್ಯೆ ಯತ್ನದ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ʼಬಾಬಾ ಕಾ ಡಾಬಾʼ ಮಾಲೀಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆ ಯತ್ನದ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ʼಬಾಬಾ ಕಾ ಡಾಬಾʼ ಮಾಲೀಕ..!

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ʼಬಾಬಾ ಕಾ ಡಾಬಾʼ ಖ್ಯಾತಿಯ ಕಾಂತಾ ಪ್ರಸಾದ್​​ ಸಫ್ದರ್​ಗಂಜ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತಾವೇಕೆ ಆತ್ಮಹತ್ಯೆಗೆ ಯತ್ನಿಸಿದ್ದು ಅನ್ನೋದಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ..!

ಪೊಲೀಸರಿಗೆ ಹೇಳಿಕೆ ನೀಡಿರುವ ಕಾಂತಾ ಪ್ರಸಾದ್​, ಸಾಕಷ್ಟು ಮಂದಿ ಯುಟ್ಯೂಬರ್​ಗಳು ನನಗೆ ಗೌರವ್​ ವಾಸನ್​ ಬಳಿ ಕ್ಷಮೆ ಯಾಚಿಸುವಂತೆ ಒತ್ತಡ ಹೇರುತ್ತಿದ್ದರು. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿದ್ದಾರೆ. ಈ ಬಗ್ಗೆ ಎಫ್​ಐಆರ್​ ದಾಖಲಿಸಿಕೊಂಡಿರುವ ಪೊಲೀಸರು ಕಾಂತಾ ಪ್ರಸಾದ್​ ದೂರಿರುವ ಯುಟ್ಯೂಬರ್​​ಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಡಿಸಿಪಿ ಅತುಲ್​ ಕುಮಾರ್​ ಠಾಕೂರ್​, ಕಾಂತಾ ಪ್ರಸಾದ್​ ಆರೋಗ್ಯ ಈಗ ಸ್ಥಿರವಾಗಿದೆ. ಮೊದಲು ಅವರನ್ನ ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಬಳಿಕ ಐಸಿಯುಗೆ ಶಿಫ್ಟ್​ ಮಾಡಲಾಗಿತ್ತು. ಇದೀಗ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಿದ್ರು.

ʼಬಾಬಾ ಕಾ ಡಾಬಾʼದಲ್ಲಿ ಗ್ರಾಹಕರೇ ಇಲ್ಲದೇ ನೊಂದಿದ್ದ ಈ ದಂಪತಿಯನ್ನ ಸೋಶಿಯಲ್​ ಮೀಡಿಯಾಗೆ ಯುಟ್ಯೂಬರ್​ ಗೌರವ್​ ವಾಸನ್​ ಪರಿಚಯಿಸಿದ್ದರು. ಇದಾದ ಬಳಿಕ ಕಾಂತಾ ಪ್ರಸಾದ್​ ಹೋಟೆಲ್​ಗೆ ಗ್ರಾಹಕರು ಹಾಗೂ ದೇಣಿಗೆಗಳ ಮಹಾಪೂರವೇ ಹರಿದುಬಂದಿತ್ತು. ಹೀಗೆ ಪ್ರಸಿದ್ಧಿಯನ್ನ ಪಡೆದ ಕಾಂತಾ ಪ್ರಸಾದ್​ ದೇಣಿಗೆ ರೂಪದಲ್ಲಿ ಬಂದ ಹಣವನ್ನ ವಾಸನ್​ ದುರುಪಯೋಗ ಮಾಡ್ತಿದ್ದಾರೆ ಎಂದು ದೂರನ್ನ ನೀಡಿದ್ದರು. ಆದರೆ ಈ ಆರೋಪಗಳನ್ನ ವಾಸನ್​ ತಳ್ಳಿ ಹಾಕಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...