ರಾಮನಗರ : ‘ವಿದ್ಯುತ್ ಬಿಲ್’ ಕೊಡಲು ಹೋದ ‘ಮೆಸ್ಕಾಂ’ ಸಿಬ್ಬಂದಿ ಮೇಲೆ ಇಬ್ಬರು ಹಲ್ಲೆ ನಡೆಸಿ ರಂಪಾಟ ಮಾಡಿದ ಘಟನೆ ನಗರದ ಟಿಪ್ಪು ಬಡಾವಣೆಯಲ್ಲಿ ನಡೆದಿದೆ.
ಲೈನ್ ಮ್ಯಾನ್ ರಫೀಕ್ ಹಾಗೂ ಮೀಟರ್ ರೀಡರ್ ಚಿನ್ಮಯ್ ಇಬ್ಬರೂ ಮನೆಯೊಂದಕ್ಕೆ ವಿದ್ಯುತ್ ಬಿಲ್ ಕೊಡಲು ಹೋಗಿದ್ದಾರೆ. ಜಾಸ್ತಿ ಕರೆಂಟ್ ಬಿಲ್ ಬಂದಿದ್ದಕ್ಕೆ ರೇಗಾಡಿದ ರಫೀಕ್ ಹಾಗೂ ಚಿನ್ಮಯ್ ಎಂಬುವವರು ‘ಮೆಸ್ಕಾಂ’ ಸಿಬ್ಬಂದಿಗಳ ವಿರುದ್ಧ ಕೂಗಾಡಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ರಾಮನಗರಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಜಾರಿಗೆ ತಂದಿದ್ದು, ಈಗಾಗಲೇ ನೋಂದಣಿ ಕೂಡ ಆರಂಭವಾಗಿದೆ.