alex Certify ದಿನಭವಿಷ್ಯ: ಈ ರಾಶಿಯವರು ಇಂದು ದೂರ ಪ್ರಯಾಣ ಮಾಡಬೇಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಭವಿಷ್ಯ: ಈ ರಾಶಿಯವರು ಇಂದು ದೂರ ಪ್ರಯಾಣ ಮಾಡಬೇಡಿ….!

ಮೇಷ : ನೂತನ ವಾಹನ ಖರೀದಿಗೆ ಮುಂದಾಗಲಿದ್ದೀರಿ. ಕಚೇರಿಯಲ್ಲಿ ಒತ್ತಡ ಇರಲಿದೆ. ವೈಯಕ್ತಿಕ ಜೀವನ ಆರಾಮದಾಯಕವಾಗಿ ಇರಲಿದೆ.

ಸಂಗಾತಿಯಿಂದ ಉತ್ತಮ ಸಲಹೆಗಳನ್ನ ಸ್ವೀಕರಿಸಲಿದ್ದೀರಿ. ಸಮಾಜದಲ್ಲಿ ಗೌರವ ದೊರೆಯಲಿದೆ.

ವೃಷಭ : ಟೀಕಿಸುವವರು ಇದ್ದೇ ಇರ್ತಾರೆ, ಅವರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಕೆಲಸ ಕಾರ್ಯದಲ್ಲಿ ಯಾವುದೇ ತೊಂದರೆ ಇಲ್ಲ. ವೈಯಕ್ತಿಕ ವಿಚಾರವನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿರುದ್ಯೋಗಿಗಳಿಗೆ ಹೊಸ ಅವಕಾಶ ಇದೆ.

ಮಿಥುನ : ಯಾರೊಂದಿಗೂ ಅತಿಯಾದ ಸಲುಗೆ ಬೇಡ. ಕಚೇರಿಯಲ್ಲಿ ನಿಮ್ಮ ಪ್ರತಿಭೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಿದೆ. ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಬಹುದು. ಬಂಡವಾಳ ಹೂಡಿಕೆ ಮಾಡಲು ಇದು ಸಕಾಲವಲ್ಲ.

ಕಟಕ : ಯಾವುದೇ ಹೊಸ ಕೆಲಸಗಳನ್ನ ಪ್ರಾರಂಭ ಮಾಡಬೇಡಿ. ಹಣಕಾಸಿನ ಹರಿವು ಉತ್ತಮವಾಗಿ ಇರಲಿದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ. ನಿಮ್ಮ ಮಾತಿನ ವೈಖರಿ ಮೇಲಾಧಿಕಾರಿಗಳಿಗೆ ಇಷ್ಟವಾಗಲಿದೆ. ನಿರೀಕ್ಷೆಗೆ ತಕ್ಕಂತೆ ಯಶಸ್ಸನ್ನ ಗಳಿಸಲಿದ್ದೀರಿ. ಪೋಷಕರ ಆರೋಗ್ಯದ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ.

ಸಿಂಹ : ಜವಳಿ ಉದ್ಯಮದವರಿಗೆ, ಕೃಷಿಕರಿಗೆ ಇದು ಲಾಭದ ದಿನವಾಗಿದೆ. ಅನಿರೀಕ್ಷಿತ ಧನಾಗಮನವಿದೆ. ಸಂಗಾತಿಯ ಆರೋಗ್ಯದ ಕಡೆ ಗಮನ ಇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಾದಿದೆ.

ಕನ್ಯಾ : ವೈವಾಹಿಕ ಸಂಬಂಧವನ್ನ ಅರಸುತ್ತಿರುವವರಿಗೆ ಇದು ಸುದಿನವಾಗಿದೆ. ಕಚೇರಿ ಕೆಲಸದ ನಿಮಿತ್ತ ದೂರದ ಪ್ರಯಾಣ ಅನಿವಾರ್ಯವಾಗಲಿದೆ. ಆರ್ಥಿಕ ಪರಿಸ್ಥಿತಿ ಎಂದಿನಂತೇ ಇರಲಿದೆ. ಗರ್ಭಿಣಿಯರು ಆರೋಗ್ಯದ ಕಡೆ ಎಚ್ಚರ ವಹಿಸಿ.

ತುಲಾ : ವಾಹನ ಚಾಲನೆ ಮಾಡುವಾಗ ಎಚ್ಚರದಿಂದಿರಿ. ಉದ್ಯಮಿಗಳಿಗೆ ಉತ್ತಮ ಲಾಭ ಕಾದಿದೆ. ಮಾತೇ ಮುತ್ತು ಮಾತೇ ಶತ್ರು ಎಂಬ ಮಾತು ತಲೆಯಲ್ಲಿರಲಿ. ಅತಿಯಾದ ಸಲುಗೆ ಯಾರೊಂದಿಗೂ ಬೇಡ. ಕುಲದೇವತೆಯನ್ನ ಆರಾಧಿಸಿ.

ವೃಶ್ಚಿಕ : ಕುಟುಂಬದಲ್ಲಿ ಸುಖ – ಶಾಂತಿ ನೆಲೆಸಲಿದೆ. ಚಿನ್ನಾಭರಣ ಖರೀದಿ ಮಾಡಲಿದ್ದೀರಿ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳಲಿದ್ದೀರಿ. ಮನೆಗೆ ಅನಿರೀಕ್ಷಿತ ಅತಿಥಿ ಆಗಮನದ ನಿರೀಕ್ಷೆ ಇದೆ. ಹೂಡಿಕೆ ಮಾಡುವ ಬಗ್ಗೆ ಸ್ವಲ್ಪ ಯೋಚನೆ ಮಾಡಿ.

ಧನು : ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಿ. ಯಾವುದೇ ಕೆಲಸವನ್ನೂ ಆಗದು ಎಂದು ಕೈಕಟ್ಟಿ ಕೂರಬೇಡಿ. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಮಾತಿನಲ್ಲಿ ನಂಬಿಕೆ ಇರಲಿ. ಸಂಗಾತಿಯ ಜೊತೆ ವೈಮನಸ್ಯ ಮೂಡಲಿದೆ. ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

ಮಕರ : ದೂರ ಪ್ರಯಾಣವನ್ನ ಆದಷ್ಟು ಮುಂದೂಡಿ. ಆರೋಗ್ಯದಲ್ಲಿ ಏರು ಪೇರು ಉಂಟಾಗುವ ಸಾಧ್ಯತೆ ಇರೋದ್ರಿಂದ ಅನಗತ್ಯ ಸಂಚಾರ ಬೇಡ. ಹಿರಿಯರೊಂದಿಗೆ ಅನವಶ್ಯಕ ವಾದಕ್ಕೆ ಇಳಿಯಬೇಡಿ.

ಕುಂಭ : ನೀವು ನಿರೀಕ್ಷೆಯೇ ಮಾಡದ ಕಡೆಯಿಂದ ನಿಮಗೆ ಹಣದ ಹರಿವು ಹೆಚ್ಚಲಿದೆ. ವಾಹನ ಖರೀದಿ ಮಾಡಲಿದ್ದೀರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಹೊರಗಿನ ಆಹಾರಗಳನ್ನ ಸೇವನೆ ಮಾಡಬೇಡಿ. ಪ್ರತಿದಿನ ಬೆಳಗ್ಗೆ ಆಂಜನೇಯನನ್ನ ಧ್ಯಾನಿಸಿ. ಕಚೇರಿಯಲ್ಲಿ ಕೆಲಸದಲ್ಲಿ ನಿರ್ಧಾರ ತೆಗೆದುಕೊಳ್ಳೋ ಮುನ್ನ ನೂರು ಬಾರಿ ಯೋಚಿಸಿ.

ಮೀನ : ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಇದು ಸ್ಪರ್ಧಾತ್ಮಕ ದಿನವಾಗಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದಿದ್ದಾರೆ ಎಂಬ ಕೊರಗು ನಿಮ್ಮನ್ನ ಕಾಡಲಿದೆ. ಮನಸ್ಸಿನಲ್ಲಿ ಉಂಟಾಗುತ್ತಿರುವ ತಳಮಳಗಳನ್ನ ಆತ್ಮೀಯರೊಡನೆ ಹೇಳಿಕೊಳ್ಳಿ. ಕೊಟ್ಟ ಸಾಲ ವಾಪಸ್​ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಲಕ್ಷ್ಮೀ ಸ್ತ್ರೋತ್ರ ಪಠನೆ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Chytré triky pro vaši kuchyni, zahradu a život: objevte naše nejlepší tipy a triky pro vaši každodenní rutinu. Uvařte si lahodné pokrmy a pěstujte si zeleninu jako profesionálové. Naše užitečné články vám pomohou vytvořit skvělý životní styl. Najít kočku: vrcholový test pozornosti на Kde se skrývá autíčko: jen Vynikající jemné bramborové placky s Jak najít Tajemná výzva: pouze 2 % lidí Pikantní krabí salát s fazolemi: lahodný recept na Vyzkoušejte to, jen géniusové: Proč je IQ test se optickým klamem: Najděte Top 10 potravin pro dlouhověkost: Co Získat nejnovější lifestylové tipy, kuchařské triky a užitečné články o zahradničení na našem webu! Najdete zde spoustu inspirace pro vylepšení svého každodenního života a získání nových dovedností. Buďte součástí naší komunity a objevujte společně s námi radost z jednoduchých, ale efektivních triků pro pohodlnější a zdravější život!