alex Certify ನಿರ್ಮಾಪಕ ಉಮಾಪತಿ ವಿರುದ್ಧವೇ ಹೊಸ ಬಾಂಬ್​ ಸಿಡಿಸಿದ ಅರುಣಾ ಕುಮಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಮಾಪಕ ಉಮಾಪತಿ ವಿರುದ್ಧವೇ ಹೊಸ ಬಾಂಬ್​ ಸಿಡಿಸಿದ ಅರುಣಾ ಕುಮಾರಿ

ನಟ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆಗೆ ಯತ್ನಿಸಿದ ಪ್ರಕರಣವು ಸಿನಿಮೀಯ ರೀತಿಯಲ್ಲಿ ತಿರುವುಗಳನ್ನ ಪಡೆಯುತ್ತಿದೆ. ದರ್ಶನ್​ ಆಪ್ತರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರೋದರ ನಡುವೆಯೇ ಪ್ರಕರಣದ ಪ್ರಮುಖ ರೂವಾರಿ ಅರುಣಾ ಕುಮಾರಿ ಮಾಧ್ಯಮದ ಮುಂದೆ ಪ್ರತ್ಯಕ್ಷರಾಗಿದ್ದಾರೆ.

ಇಷ್ಟೆಲ್ಲ ಘಟನೆ ನಡೆಯೋಕೆ ನಿರ್ಮಾಪಕ ಉಮಾಪತಿಯೇ ನೇರ ಕಾರಣ. ಉಮಾಪತಿ ಏನು ಹೇಳಿ ಕೊಟ್ಟಿದ್ದಾರೋ ನಾನು ಅದೇ ರೀತಿ ನಡೆದುಕೊಂಡಿದ್ದೇನೆ. ಈ ಪ್ರಕರಣದಲ್ಲಿ ಉಮಾಪತಿ ನನ್ನನ್ನ ಏಕೆ ಬಳಕೆ ಮಾಡಿಕೊಂಡ್ರು ಅನ್ನೋದು ನನಗೆ ತಿಳಿದಿಲ್ಲ. ಈ ಎಲ್ಲದರ ಬಗ್ಗೆ ಬೆಂಗಳೂರು ಪೊಲೀಸರ ಮುಂದೆಯೇ ನಾನು ಹೇಳಿಕೆ ನೀಡಿದ್ದೇನೆ ಎಂದು ಅರುಣಾ ಕುಮಾರಿ ಹೇಳಿದ್ದಾರೆ.

ನನಗೆ ದರ್ಶನ್​ ತೋಟದ ಮನೆ ಎಲ್ಲಿದೆ ಅನ್ನೋದು ತಿಳಿದಿಲ್ಲ. ನನ್ನನ್ನ ದರ್ಶನ್​ರಿಗೆ ಭೇಟಿ ಮಾಡಿಸಿದ್ದೇ ಈ ಉಮಾಪತಿ. ಹರ್ಷ ಹಾಗೂ ದರ್ಶನ್​ ತುಂಬಾ ಹತ್ತಿರವಾಗುತ್ತಿದ್ದಾರೆ. ದರ್ಶನ್​ ಜೊತೆ ಸೇರಿ ಹರ್ಷ ಏನೋ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರನ್ನ ನಾನು ದೂರ ಮಾಡಬೇಕು ಎಂಬರ್ಥದಲ್ಲಿ ಉಮಾಪತಿ ಮಾತನಾಡುತ್ತಿದ್ದರು. ಹೀಗಾಗಿ ಉಮಾಪತಿ ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಎಲ್ಲಿ ಆದರೂ ನನ್ನ ಹೆಸರು ಬಾಯ್ಬಿಟ್ಟರೆ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಉಮಾಪತಿ ನನಗೆ ಬೆದರಿಕೆ ಹಾಕಿದ್ದಾರೆ. ದರ್ಶನ್​​ಗೆ ಹತ್ತಿರವಾಗಬೇಕು ಎಂದು ಉಮಾಪತಿ ಮಧ್ಯಮ ವರ್ಗದ ಹೆಣ್ಣು ಮಗಳನ್ನ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...