alex Certify ಮುಳುಗುತ್ತಿರೋ ಜೆಡಿಎಸ್​ ಜೊತೆ ಹೊಂದಾಣಿಕೆ ಮಾತೇ ಇಲ್ಲ: ಅರುಣ್​ ಸಿಂಗ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಳುಗುತ್ತಿರೋ ಜೆಡಿಎಸ್​ ಜೊತೆ ಹೊಂದಾಣಿಕೆ ಮಾತೇ ಇಲ್ಲ: ಅರುಣ್​ ಸಿಂಗ್​

ಅಧಿಕೃತವಾಗಿ ಹಾಗೂ ಅನಧಿಕೃತವಾಗಿ ಜೆಡಿಎಸ್​ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​​ ಹೇಳಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಜೆಡಿಎಸ್​ ಮುಳುಗುತ್ತಿರುವ ಪಕ್ಷ ಹಾಗೂ ಬಿಜೆಪಿ ಬೆಳೆಯುತ್ತಿರುವ ಪಕ್ಷ ಎಂದು ಹೇಳಿದ್ರು.

ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಬೇಕು ಅನ್ನೋದು ನಮ್ಮ ಸಂಕಲ್ಪವಾಗಿದೆ. ಜೆಡಿಎಸ್​, ಕಾಂಗ್ರೆಸ್​ ಸರ್ಕಾರವನ್ನು ಜನತೆ ನೋಡಿದ್ದಾರೆ. ನಮ್ಮದು ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ. ಬಿ ಎಸ್​ ಯಡಿಯೂರಪ್ಪ ದೊಡ್ಡ ನಾಯಕರಿದ್ದಾರೆ. ಅವರಿಗೆ ಪಕ್ಷ ಸಂಘಟನೆಯ ಅನುಭವವಿದೆ. ಅವರ ಅನುಭವವನ್ನೇ ನಾವು ಪಕ್ಷ ಸಂಘಟನೆಗೆ ಬಳಸಿಕೊಳ್ತೇವೆ ಎಂದು ಹೇಳಿದ್ರು.

ಇದೇ ವೇಳೆ ರಾಜ್ಯ ಸಂಪುಟದ ವಿಚಾರವಾಗಿಯೂ ಮಾತನಾಡಿದ ಅವರು, ರಾಜ್ಯ ಸಂಪುಟದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಖಾತೆ ಹಂಚಿಕೆ ಸಿಎಂ ಪರಮಾಧಿಕಾರದ ವಿಚಾರವಾಗಿದೆ. ಖಾತೆಗಳು ಹಂಚಿಕೆಯಾಗಿದ್ದು ಸಚಿವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...