alex Certify ಎಲೆಕ್ಷನ್ ಫಲಿತಾಂಶದ ಬಗ್ಗೆ ಭರ್ಜರಿ ಬೆಟ್ಟಿಂಗ್: ಅಡಿಕೆ ತೋಟವನ್ನೇ ಪಣಕಿಟ್ಟ ರೈತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಷನ್ ಫಲಿತಾಂಶದ ಬಗ್ಗೆ ಭರ್ಜರಿ ಬೆಟ್ಟಿಂಗ್: ಅಡಿಕೆ ತೋಟವನ್ನೇ ಪಣಕಿಟ್ಟ ರೈತರು

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಬೆಂಬಲಿಗರ ಭರಾಟೆ ಭರ್ಜರಿಯಾಗಿ ನಡೆಯುತ್ತಿದೆ. ಅಡಿಕೆ ತೋಟವನ್ನು ಕೂಡ ಬಾಜಿ ಕಟ್ಟಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಹಣ, ಟ್ರ್ಯಾಕ್ಟರ್, ಕಾರ್, ಕುರಿ ಮೊದಲಾದವುಗಳನ್ನು ಪಣಕ್ಕಿಡಲಾಗಿದೆ. ಚನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜು ಪರವಾಗಿ ಇಬ್ಬರು ರೈತರು ತಲಾ ಎರಡು ಎಕರೆ ಅಡಿಕೆ ತೋಟ ಪಣಕ್ಕಿಟ್ಟಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ನಿರಂಜನ್ ಕುಮಾರ್ ಪರವಾಗಿ ಪುರಸಭೆ ಸದಸ್ಯ ಒಂದು ಕೋಟಿ ರೂ. ಬೆಟ್ಟಿಂಗ್ ಘೋಷಣೆ ಮಾಡಿದ್ದಾರೆ. ಹೆಚ್.ಡಿ. ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರವಾಗಿ ವ್ಯಕ್ತಿಗಳು ತಲಾ 5 ಲಕ್ಷ ಬೆಟ್ ಕಟ್ಟಿ ಬಾಂಡ್ ಪೇಪರ್ ಮಾಡಿಸಿದ್ದಾರೆ. ನಾಗಮಂಗಲದಲ್ಲಿ ಚೆಲುವರಾಯಸ್ವಾಮಿ ಪರವಾಗಿ 13 ಲಕ್ಷ ರೂ. ಮೌಲ್ಯದ ಕಾರು, ಟ್ರ್ಯಾಕ್ಟರ್, ಟಗರುಗಳನ್ನು ರೈತರು ಬಾಜಿ ಕಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...