alex Certify SHOCKING: ಮಗುವಿಗೆ ಸುಟ್ಟು ಗಾಯಗೊಳಿಸಿದ ಅಂಗನವಾಡಿ ಸಹಾಯಕಿ ವಿಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮಗುವಿಗೆ ಸುಟ್ಟು ಗಾಯಗೊಳಿಸಿದ ಅಂಗನವಾಡಿ ಸಹಾಯಕಿ ವಿಕೃತಿ

ಕೋಲಾರ: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನಿಡಘಟ್ಟದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯೊಬ್ಬರು ಮಗುವಿಗೆ ಬೆಂಕಿಯಿಂದ ಸುಟ್ಟು ಗಾಯಗೊಳಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಂಗನವಾಡಿ ಸಹಾಯಕಿ ಶ್ರೀದೇವಿ ಕೃತ್ಯವೆಸಗಿದವರು. ಗ್ರಾಮದ ಮುನಿರಾಜು ಅವರ 4 ವರ್ಷದ ಪುತ್ರಿಯ ಎದೆ ಭಾಗದಲ್ಲಿ ಸುಟ್ಟಿದ್ದಾರೆ. ಈ ಹಿಂದೆಯೂ ಮಗುವಿನ ಕಾಲಿನ ಮೇಲೆ ಸುಟ್ಟು ಗಾಯಗೊಳಿಸಿದ್ದರು. ಆಗ ಗ್ರಾಮಸ್ಥರು ಬುದ್ಧಿವಾದ ಹೇಳಿದ್ದು, ಈಗ ಮತ್ತೊಮ್ಮೆ ನಮ್ಮ ಮಗುವನ್ನೇ ಗುರಿಯಾಗಿಸಿಕೊಂಡು ಅಂಗನವಾಡಿ ಸಹಾಯಕಿ ಶ್ರೀದೇವಿ ಇಂತಹ ಕೃತ್ಯವೆಸಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ನಿಡಘಟ್ಟ ಕೇಂದ್ರದ ಬಾಲ ವಿಕಾಸ ಸಮಿತಿ ಸದಸ್ಯರು, ಜಿಲ್ಲಾ ನಿರೂಪಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಮತ್ತು ಅಂಗನವಾಡಿ ಕೇಂದ್ರದ ಫಲಾನುಭವಿಗಳು, ಮಗುವಿನ ಪೋಷಕರು ಒಳಗೊಂಡಂತೆ ಶನಿವಾರ ಸಭೆ ನಡೆಸಲಾಗಿದೆ. ಮಾಲೂರು ತಾಲೂಕಿನ ತುರುಗಳೂರು ಅಂಗನವಾಡಿ ಕೇಂದ್ರಕ್ಕೆ ಸಹಾಯಕಿ ಶ್ರೀದೇವಿ ಅವರನ್ನು ವರ್ಗಾಯಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept