alex Certify ಮನೆ ಬಾಗಿಲು ಒಡೆದು ಒಳ ಪ್ರವೇಶಿಸಿದ ಮಾಲೀಕನ ಕಣ್ಣಿಗೆ ಬಿತ್ತು ತುಂಡು ತುಂಡಾದ ದೇಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಗಿಲು ಒಡೆದು ಒಳ ಪ್ರವೇಶಿಸಿದ ಮಾಲೀಕನ ಕಣ್ಣಿಗೆ ಬಿತ್ತು ತುಂಡು ತುಂಡಾದ ದೇಹ

ದೆಹಲಿಯಲ್ಲಿ ಪ್ರಿಯಕರನಿಂದ್ಲೇ ಭೀಕರವಾಗಿ ಹತ್ಯೆಯಾದ ಶ್ರದ್ಧಾವಾಕರ್ ಕೊಲೆ ಪ್ರಕರಣದ ಬಳಿಕ ದೇಶದಾದ್ಯಂತ ಇಂತಹ ಮತ್ತಷ್ಟು ಘನಘೋರ ಪ್ರಕರಣಗಳು ವರದಿಯಾಗ್ತಿವೆ.

ಅಂತಹ ಮತ್ತೊಂದು ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವರದಿಯಾಗಿದೆ. ಬೀಗ ಹಾಕಿದ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಇರಿಸಲಾಗಿದ್ದ ಡ್ರಮ್ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಒಂದು ವರ್ಷದಿಂದ ಶವ ಡ್ರಮ್‌ನಲ್ಲಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ವರದಿಯ ಪ್ರಕಾರ ಬಾಡಿಗೆದಾರನು ತನ್ನ ಬಾಕಿಯನ್ನು ಪಾವತಿಸದ ಕಾರಣ ಮನೆ ಮಾಲೀಕರು ಬಲವಂತವಾಗಿ ಮನೆಗೆ ಪ್ರವೇಶಿಸಿದ ನಂತರ ದೇಹದ ಭಾಗಗಳು ಪತ್ತೆಯಾಗಿವೆ.

ನಗರದ ಮಧುರವಾಡ ಪ್ರದೇಶದಲ್ಲಿ ಮನೆಯಲ್ಲಿರುವ ಬಾಡಿಗೆದಾರರ ವಸ್ತುಗಳನ್ನು ತೆರವುಗೊಳಿಸಲು ಮಾಲೀಕರು ಬಲವಂತವಾಗಿ ಮನೆಗೆ ಪ್ರವೇಶಿಸಿದಾಗ ಪ್ರಕರಣ ವರದಿಯಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಕಮಿಷನರ್ ಸಿ ಶ್ರೀಕಾಂತ್ ಹೇಳಿದ್ದಾರೆ.

ಜೂನ್ 2021 ರಲ್ಲಿ ತನ್ನ ಪತ್ನಿ ಗರ್ಭಿಣಿ ಎಂದು ಉಲ್ಲೇಖಿಸಿ ಬಾಡಿಗೆದಾರನು ಬಾಕಿ ಪಾವತಿಸದೆ ಮನೆಯನ್ನು ಖಾಲಿ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಶವವನ್ನು ತುಂಡುಗಳಾಗಿ ಕತ್ತರಿಸಲಾಗಿದ್ದು ಈಗ ಪತ್ತೆಯಾಗಿದೆ ಎಂದು ಪ್ರಾಥಮಿಕ ಪುರಾವೆಗಳು ಸುಳಿವು ನೀಡುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಮನೆಯಲ್ಲಿದ್ದ ಬಾಡಿಗೆದಾರನ ಪತ್ನಿ ಎಂದು ಭಾವಿಸಿ ಮನೆ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...