alex Certify ಸೋರುತ್ತಿದೆ ಹೊಸ ಸಂಸತ್ ಭವನ: ವಿಡಿಯೋ ಹಂಚಿಕೊಂಡ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋರುತ್ತಿದೆ ಹೊಸ ಸಂಸತ್ ಭವನ: ವಿಡಿಯೋ ಹಂಚಿಕೊಂಡ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ

ನವದೆಹಲಿ: ದೆಹಲಿಯಲ್ಲಿ ಭಾರೀ ಮಳೆಯ ನಂತರ ಹೊಸ ಸಂಸತ್ ಭವನದ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಗುರುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಘಟನೆಯ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರಗಳ ಅಡಿಯಲ್ಲಿ ನಿರ್ಮಿಸಲಾದ ಪ್ರಮುಖ ಕಟ್ಟಡಗಳು ಇದೇ ರೀತಿಯ ದೃಶ್ಯಗಳಿಗೆ ಸಾಕ್ಷಿಯಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಹಳೆಯ ಸಂಸತ್ ಕಟ್ಟಡವೇ ಉತ್ತಮ ಎಂದು ಅವರು ಸಲಹೆ ನೀಡಿದ್ದು, ‘ಹಳೆಯ ಸಂಸತ್ ಭವನಕ್ಕೆ ಏಕೆ ಹಿಂತಿರುಗಬಾರದು’ ಎಂದು ಪ್ರಶ್ನಿಸಿದ್ದಾರೆ.

ಲೋಕಸಭೆ ಸಚಿವಾಲಯವೂ ಈ ಕುರಿತು ಸ್ಪಷ್ಟನೆ ನೀಡಿದೆ. ದೆಹಲಿಯಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಹೊಸದಾಗಿ ಉದ್ಘಾಟನೆಗೊಂಡ ಸಂಸತ್ ಭವನದ ಲಾಬಿಗೆ ನೀರು ಸೋರಿಕೆಯಾಗಿದೆ.

ಹಸಿರು ಸಂಸತ್ತಿನ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು, ಲಾಬಿ ಸೇರಿದಂತೆ ಕಟ್ಟಡದ ಹಲವಾರು ಭಾಗಗಳಲ್ಲಿ ಗಾಜಿನ ಗುಮ್ಮಟಗಳನ್ನು ನಿರ್ಮಿಸಲಾಗಿದೆ, ಇದರಿಂದಾಗಿ ಹೇರಳವಾದ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳಬಹುದು. ಬುಧವಾರದ ಭಾರೀ ಮಳೆಯ ಸಮಯದಲ್ಲಿ ಕಟ್ಟಡದ ಲಾಬಿಯ ಮೇಲೆ ಗಾಜಿನ ಗುಮ್ಮಟಗಳಿಗೆ ಬಳಸಿದ ಅಂಟು ವಸ್ತುವು ಸ್ವಲ್ಪಮಟ್ಟಿಗೆ ಸಡಿಲವಾಗಿ ಸಣ್ಣ ಸೋರಿಕೆಯಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Proč semena Jak vařit těstoviny, aby Nejen vejce: potraviny, Může se srdce zastavit bez varování? Odpověď kardiologa 22. února – jaký církevní svátek slavíme a Jak barva vašeho jazyka odráží vaše zdraví: Proč se nazývá Jak přežít bez Jak si zapamatovat příbuzné: první sobota rodičů v roce 8 důvodů, proč kočka mňouká: Nejčastější příčiny kočičích koncertů 7 způsobů, jak přeměnit staré tričko Recept na červený zelí salát s okurkou, mrkví a hráškem