alex Certify ದಾರಿ ತಪ್ಪಿದ ಮಹಿಳೆಯಿಂದ ಘೋರ ಕೃತ್ಯ: ಅಕ್ರಮ ಸಂಬಂಧ ಹೊಂದಿದ್ದ ಯುವಕನ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಮಹಿಳೆಯಿಂದ ಘೋರ ಕೃತ್ಯ: ಅಕ್ರಮ ಸಂಬಂಧ ಹೊಂದಿದ್ದ ಯುವಕನ ಕೊಲೆ

ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಮಹಿಳೆಯ ಪತಿ ಕೊಲೆ ಮಾಡಿದ್ದಾನೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಹಲಕಿ ಗ್ರಾಮದ ಬಳಿ ಘಟನೆ ನಡೆದಿದೆ. 24 ವರ್ಷದ ರಮೇಶ್ ಕೊಲೆಯಾದ ಯುವಕ. ಬೈಲಹೊಂಗಲ ತಾಲೂಕಿನ ಹೊನ್ನೂರ ಗ್ರಾಮದ ನಿವಾಸಿಯಾಗಿರುವ ರಮೇಶ ಮನೆ ಪಕ್ಕದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದು, ಈ ವಿಚಾರ ತಿಳಿದ ಮಹಿಳೆಯ ಗಂಡ ಯಲ್ಲಪ್ಪ ಮತ್ತು ಆತನ ಸ್ನೇಹಿತರು ಸೇರಿ ರಮೇಶನನ್ನು ಕೊಲೆ ಮಾಡಿದ್ದಾರೆ.

ಅಕ್ರಮ ಸಂಬಂಧದ ವಿಚಾರ ಗೊತ್ತಾಗಿ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ಅಕ್ರಮ ಸಂಬಂಧ ಬೆಳೆಸಿದ ತಪ್ಪಿಗಾಗಿ ರಮೇಶ ಎರಡೂವರೆ ಲಕ್ಷ ರೂಪಾಯಿ ದಂಡವನ್ನು ಯಲ್ಲಪ್ಪನಿಗೆ ಕೊಟ್ಟಿದ್ದ. ಯಲ್ಲಪ್ಪನ ಪತ್ನಿ ಆತನನ್ನು ಬಿಟ್ಟು ರಮೇಶನ ಮನೆಗೆ ಬಂದಿದ್ದು, ಮತ್ತೆ ಗಂಡನ ಸಂಪರ್ಕ ಬೆಳೆಸಿ ತವರು ಮನೆ ಸೇರಿದ್ದಾಳೆ. ರಮೇಶನನ್ನು ಬಿಟ್ಟು ಬಂದು ಮಹಿಳೆ ಪತಿ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿಸಿದ್ದಾರೆ ಎಂದು ರಮೇಶನ ಕುಟುಂಬದವರು ಆರೋಪಿಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kun de mest opmærksomme kan At droppe sukker: Kan Find symaskinen på 8 sekunder: Et opmærksomhedspuslespil Det fungerede på en emhætte, Hvor er fejlen i billedet - du skal