alex Certify BIG NEWS : ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ‘ಪವಿತ್ರಾ ಗೌಡ’ ಆಪ್ತ ಗೆಳತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ‘ಪವಿತ್ರಾ ಗೌಡ’ ಆಪ್ತ ಗೆಳತಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಜೈಲು  ಪಾಲಾಗಿರುವ ನಟ ದರ್ಶನ್ ಅವರನ್ನು ನೋಡಲು ದಿನೇ ದಿನೇ ಆಪ್ತರು  ಬರುತ್ತಿದ್ದಾರೆ.  ಜೈಲಿನಲ್ಲಿ ನಟ ದರ್ಶನ್ ಅವರನ್ನು ನೋಡಲು ಮಂಗಳವಾರ ಯುವತಿಯೊಬ್ಬರು ಬಂದಿದ್ದರು. ಅವರು ಆರೋಪಿ ‘ಪವಿತ್ರಾ ಗೌಡ’ ಆಪ್ತ ಗೆಳತಿ ಎನ್ನಲಾಗಿದೆ.

ಹೌದು, ರೇಣುಕಾಸ್ವಾಮಿ ಕೊಲೆ  ಪ್ರಕರಣದ ಏ-1 ಆರೋಪಿ ಪವಿತ್ರಾ ಗೌಡ ಆಪ್ತ ಗೆಳತಿ ಸಮತ ದರ್ಶನ್ ನೋಡಲು ಬಂದಿದ್ದಾರೆ. ಪವಿತ್ರಾ ಗೌಡ ಹಾಗೂ ಸಮತಾ ಬಹಳ ಕ್ಲೋಸ್ ಇದ್ದರಂತೆ.  ಹಾಗಾಗಿ ಅವರು ನಟ ದರ್ಶನ್ ರನ್ನು ನೋಡಲು ಬಂದಿದ್ದಂತೆ ಎಂದು ಹೇಳಲಾಗುತ್ತಿದೆ. ಪವಿತ್ರಾ ಗೌಡ ಗೆಳತಿಯಾದರೆ ಪವಿತ್ರಾ ಗೌಡರನ್ನು ನೋಡುವುದು ಸರಿ..! ದರ್ಶನ್ ರನ್ನು ಯಾಕೆ ನೋಡಲು ಬರಬೇಕಿತ್ತು..? ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ದರ್ಶನ್ ಕುಟುಂಬದವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...