alex Certify ಬೊಲೆರೋ ಡಿಕ್ಕಿ: ಬೈಕ್ ನಲ್ಲಿದ್ದ ಬಾಲಕಿ ಸಾವು: ಪರಾರಿಯಾದವರನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೊಲೆರೋ ಡಿಕ್ಕಿ: ಬೈಕ್ ನಲ್ಲಿದ್ದ ಬಾಲಕಿ ಸಾವು: ಪರಾರಿಯಾದವರನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಜನ

ಮಂಗಳೂರು: ಮದ್ಯದ ಅಮಲಿನಲ್ಲಿ ಬೊಲೆರೋ ವಾಹನ ಬೈಕ್ ಗೆ ಡಿಕ್ಕಿಯಾಗಿ ಬಾಲಕಿ ಸಾವನ್ನಪ್ಪಿದ್ದು, ಅಪಘಾತದ ಬಳಿಕ ವಾಹನದ ಸಮೇತ ಪರಾರಿ ಆಗುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ.

ಸ್ಥಳೀಯರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಪರಾರಿ ಆಗುತ್ತಿದ್ದವರನ್ನು ಹಿಡಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೀಟು ಬಳಿ ಘಟನೆ ನಡೆದಿದೆ. ತಲೆ ಮೇಲೆ ಬೊಲೆರೋ ವಾಹನ ಹರಿದು 13 ವರ್ಷದ ಅನರ್ಘ್ಯ ಸಾವನ್ನಪ್ಪಿದ್ದಾರೆ.

ಕಲ್ಮಂಜ ಗ್ರಾಮದ ಕುಡಂಚಿ ಗುರುಪ್ರಸಾದ್ ಗೋಖಲೆ, ಗಾನವಿ ಅವರ ಪುತ್ರಿಯಾಗಿರುವ ಅನರ್ಘ್ಯ ಉಜಿರೆ ಎಸ್‌ಡಿಎಂ ಶಾಲೆಯ 6ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬೊಲೆರೋ ವಾಹನ ಡಿಕ್ಕಿ ಹೊಡೆದು ಬೈಕ್ ಅನ್ನು 300 ಮೀಟರ್ ಎಳೆದುಕೊಂಡು ಹೋಗಿದೆ. ಅಪಘಾತದ ಬಳಿಕ ಬೊಲೆರೋ ವಾಹನ ಸಮೇತ ನಾಲ್ವರು ಪರಾರಿಯಾಗುತ್ತಿದ್ದ ವೇಳೆ ಅಡ್ಡ ಹಾಕಿದ ಸಾರ್ವಜನಿಕರು ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...