alex Certify BREAKING : ಸಾವನ್ನೇ ಗೆದ್ದು ಬಂದ ಯುವತಿ.! : ಮೈದಾಳ ಕೆರೆಗೆ ಬಿದ್ದವಳು ಪವಾಡಸದೃಶವಾಗಿ ಪಾರು.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಸಾವನ್ನೇ ಗೆದ್ದು ಬಂದ ಯುವತಿ.! : ಮೈದಾಳ ಕೆರೆಗೆ ಬಿದ್ದವಳು ಪವಾಡಸದೃಶವಾಗಿ ಪಾರು.!

ತುಮಕೂರು : ನೀರಿಗೆ ಬಿದ್ದಿದ್ದ ಯುವತಿ ಪವಾಡಸದೃಶವಾಗಿ ಪಾರಾದ ಘಟನೆ ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ನಡೆದಿದೆ.

ಸತತ 12 ಗಂಟೆ ಕಾರ್ಯಾಚರಣೆ ಬಳಿಕ ಯುವತಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ನೀರಿನ ನಡುವೆ ಬಂಡೆ ಹಿಡಿದು ಯುವತಿ ನಿಂತಿದ್ದಳು, ಸದ್ಯ ಸಿಬ್ಬಂದಿಗಳು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ಕೆರೆಕೋಡಿ ನೋಡಲೆಂದು ಹೋಗಿದ್ದ ಯುವತಿ ಸೆಲ್ಪಿ ತೆಗೆಯುವಾಗ ಕಾಲು ಜಾರಿ ಬಿದ್ದ ಘಟನೆ ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ನಡೆದಿತ್ತು. ಗುಬ್ಬಿ ಮೂಲದ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ ಹಂಸ (19) ಎಂಬ ಯುವತಿ ಸಾವನ್ನೇ ಗೆದ್ದು ಬಂದಿದ್ದಾಳೆ.

ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದ ಯುವತಿ, ಅಲ್ಲಿಯೇ ಸಮೀಪವಿರುವ ಮೈದಾಳ ಕೆರೆಕೋಡಿ ನೋಡಲು ಹೋಗಿದ್ದಳು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಳು. ಮೊದಲು ಈಕೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಕಾರ್ಯಾಚರಣೆ ನಡೆಸಿದ್ದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...