2004 ಏಪ್ರಿಲ್ 17, ಖ್ಯಾತ ನಟಿ ಸೌಂದರ್ಯ ಬೆಂಗಳೂರು ಬಳಿಯ ಜಕ್ಕೂರು ಏರ್ಸ್ಟ್ರಿಪ್ನಿಂದ ಒಂದೇ ಇಂಜಿನ್ನ ಸೆಸ್ನಾ 180 ವಿಮಾನವನ್ನು ಹತ್ತಿದ್ದರು. ತೆಲುಗು ಸಿನಿಮಾದಲ್ಲಿ ಭಾರೀ ಖ್ಯಾತಿ ಹೊಂದಿದ್ದ ಸೌಂದರ್ಯ ಆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದು, ನೆರೆಯ ಆಂಧ್ರಪ್ರದೇಶದ ಕರಿಂನಗರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಲು ಅವರು ಹೊರಟಿದ್ದು ಆಗ ಬೆಳಿಗ್ಗೆ 11 ಗಂಟೆಯಾಗಿತ್ತು.
ಐದು ನಿಮಿಷಗಳ ನಂತರ, ಸೆಸ್ನಾ ಬೆಂಕಿಯ ಚೆಂಡಾಗಿ ಸ್ಫೋಟಗೊಂಡು ಕೆಳಗೆ ಬಿದಿದ್ದು, ಸೌಂದರ್ಯ ಮತ್ತು ಆ ವಿಮಾನದಲ್ಲಿದ್ದ ಅವರ ಜೊತೆಯವರು ಹೊರಬರಲು ಸಾಧ್ಯವಾಗಲಿಲ್ಲ. ಅವರೆಲ್ಲರೂ ಸುಟ್ಟು ಕರಕಲಾದರು. ಸೌಮ್ಯ ಸತ್ಯನಾರಾಯಣ, ಜನಪ್ರಿಯವಾಗಿ ಸೌಂದರ್ಯ ಎಂದು ಕರೆಯಲ್ಪಡುವವರು ಮರಣಹೊಂದಿದಾಗ ಕೇವಲ 32 ವರ್ಷ ವಯಸ್ಸಿನವರಾಗಿದ್ದರು. ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 1999 ರ ಹಿಂದಿ ಚಿತ್ರ ಸೂರ್ಯವಂಶಂನಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ ನಂತರ ಅವರು ತುಂಬಾ ಫೇಮಸ್ ಆದರು.
ಸೌಂದರ್ಯ, ಅವರ ಸಹೋದರ ಅಮರನಾಥ್, ಬಿಜೆಪಿ ಕಾರ್ಯಕರ್ತ ರಮೇಶ್ ಕದಂ ಮತ್ತು ಪೈಲಟ್ ಜಾಯ್ ಫಿಲಿಪ್ಸ್ ಅವರೊಂದಿಗೆ ಕರಿಂನಗರಕ್ಕೆ ಹೋಗುತ್ತಿದ್ದರು, ಅವರಲ್ಲಿ ಯಾರೂ ಬದುಕಲಿಲ್ಲ. ವಾಸ್ತವವಾಗಿ, ದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದವು.
ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ, ಸೆಸ್ನಾ 180 ವಿಮಾನವು ಬೆಂಗಳೂರಿನ ಬಳಿಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕ್ಯಾಂಪಸ್ನಲ್ಲಿ ಬಿತ್ತು. 2004 ಏಪ್ರಿಲ್ 17 ರಂದು ಏನಾಯಿತು ಎಂಬುದರ ವಿವರ ಇಲ್ಲಿದೆ.
- ವಿಮಾನ, ಸೆಸ್ನಾ 180, ಬೆಳಿಗ್ಗೆ 11.05 ಕ್ಕೆ ಜಕ್ಕೂರು ಏರ್ಸ್ಟ್ರಿಪ್ನಿಂದ ಹೊರಟಿತು.
- ಆ ಸಮಯದಲ್ಲಿ ಸೌಂದರ್ಯ, ಅವರ ಸಹೋದರ ಅಮರನಾಥ್, ಬಿಜೆಪಿ ಕಾರ್ಯಕರ್ತ ರಮೇಶ್ ಕದಂ ಮತ್ತು ಪೈಲಟ್ ಜಾಯ್ ಫಿಲಿಪ್ಸ್ ಅವರು ಆಗಿನ ಆಂಧ್ರಪ್ರದೇಶದ ಕರಿಂನಗರಕ್ಕೆ ಹೋಗುತ್ತಿದ್ದರು.
- ಸಾರ್ವತ್ರಿಕ ಚುನಾವಣೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪರವಾಗಿ ಪ್ರಚಾರ ಮಾಡಲು ಅವರು ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದರು.
- ವಿಮಾನವು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕ್ಯಾಂಪಸ್ನಲ್ಲಿ ಬೀಳುವ ಮೊದಲು ಪಶ್ಚಿಮಕ್ಕೆ ತಿರುಗಿತು.
- ಇದು 150 ಅಡಿ (46 ಮೀ) ಎತ್ತರವನ್ನು ತಲುಪಿತ್ತು ಮತ್ತು ಬೇಕಾದ ಏರುವ ವೇಗವನ್ನು ತಲುಪುವ ಮೊದಲು, ತೀವ್ರವಾದ ಎಡ ತಿರುವು ತೆಗೆದುಕೊಂಡಿತು, ಇದು ಕೆಳಗೆ ಬೀಳಲು ಕಾರಣವಾಯಿತು.
- ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡು ನೆಲಕ್ಕೆ ಬಡಿಯಿತು.
- ವಿಶ್ವವಿದ್ಯಾನಿಲಯದ ಪ್ರಾಯೋಗಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಲ್ಲಿ ಒಬ್ಬರಾದ ಬಿಎನ್ ಗಣಪತಿ ಅವರು ಪ್ರಯಾಣಿಕರನ್ನು ರಕ್ಷಿಸಲು ವಿಮಾನದ ಬಳಿಗೆ ಓಡಿಬಂದರು. ವಿಮಾನವು ಬೀಳುವ ಮೊದಲು ತೂರಾಡಿತು ಎಂದು ಹೇಳಿದ್ದರು.
- ಅಂದಿನ ಕರ್ನಾಟಕ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಕೇಂದ್ರ ವಾಣಿಜ್ಯ ಸಚಿವ ಮತ್ತು ಆಗಿನ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಜೇಟ್ಲಿ ಅವರು ಅಪಘಾತದ ನಂತರ ಜಕ್ಕೂರಿಗೆ ಬಂದರು. ಬಿಜೆಪಿ ನಗರ ಘಟಕವು ಅಂದಿನ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿತ್ತು.
- ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸೌಂದರ್ಯ ಅವರ ಅಕಾಲಿಕ ಮರಣಕ್ಕೆ ಸಂತಾಪ ವ್ಯಕ್ತಪಡಿಸಿದ್ದರು.
- ಪ್ರಮುಖ ತೆಲುಗು ಸೂಪರ್ಸ್ಟಾರ್ ಸೌಂದರ್ಯ ಅವರು ದಕ್ಷಿಣದಲ್ಲಿ ಬಿಜೆಪಿಗೆ ಜನರನ್ನು ಸೆಳೆಯುವವರಾಗಿದ್ದರು.
- ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ಪೊಲೀಸ್ ದೂರು ದಾಖಲಾದ ನಂತರ 20 ವರ್ಷಗಳ ನಂತರ ಸೌಂದರ್ಯ ಅವರ ಸಾವು ಈಗ ಸುದ್ದಿಯಲ್ಲಿದೆ. ತೆಲುಗು ನಟ ಮೋಹನ್ ಬಾಬು ಅವರೊಂದಿಗಿನ ಆಸ್ತಿ ವಿವಾದಕ್ಕೆ ಸಂಬಂಧಿಸಿ ಕೊಲೆ ನಡೆದಿದೆ. ಸೌಂದರ್ಯ ಅವರ ಮರಣವು ಆಕಸ್ಮಿಕವಲ್ಲ ಎಂದು ದೂರುದಾರ ಚಿಟ್ಟಿಮಲ್ಲು ಆರೋಪಿಸಿದ್ದಾರೆ.