alex Certify BIG BREAKING: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ‌ʼಸಂಚಾರಿʼ ವಿಜಯ್ ಬದುಕೋ ಸಾಧ್ಯತೆ ತೀರಾ ಕಡಿಮೆ – ಪತ್ರಿಕಾಗೋಷ್ಟಿಯಲ್ಲಿ ಕಣ್ಣೀರಿಟ್ಟ ಸಹೋದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ‌ʼಸಂಚಾರಿʼ ವಿಜಯ್ ಬದುಕೋ ಸಾಧ್ಯತೆ ತೀರಾ ಕಡಿಮೆ – ಪತ್ರಿಕಾಗೋಷ್ಟಿಯಲ್ಲಿ ಕಣ್ಣೀರಿಟ್ಟ ಸಹೋದರ

ಭೀಕರ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ‌ʼಸಂಚಾರಿʼ ವಿಜಯ್ ಬದುಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಕೆಲ ಕ್ಷಣಗಳ ಹಿಂದಷ್ಟೇ ಅಪೊಲೋ ಆಸ್ಪತ್ರೆ ವೈದ್ಯರು, ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಈ ವಿಷಯ ತಿಳಿಸಿದ್ದಾರೆ

ನಟ ಸಂಚಾರಿ ವಿಜಯ್ ತಮ್ಮ ಸ್ನೇಹಿತ ನವೀನ್ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದು, ಬೈಕ್ ಸ್ಕಿಡ್ ಆಗಿ ಕರೆಂಟ್ ಕಂಬಕ್ಕೆ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದಾಗಿ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿತ್ತು.

ಬಳಿಕ ತೀವ್ರ ನಿಗಾ ಘಟಕದಲ್ಲಿ ಸಂಚಾರಿ ವಿಜಯ್‌ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಇದೀಗ ಚಿಕಿತ್ಸೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಈ ವಿಷಯವನ್ನು ಸ್ವತಃ ಸಂಚಾರಿ ವಿಜಯ್‌ ಸಹೋದರ ಕಣ್ಣೀರಿಟ್ಟು ಪತ್ರಕರ್ತರಿಗೆ ಈ ವಿಷಯ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Forskellen mellem de to katte: Kun et geni kunne svare Tre overraskende produkter Et synstestspil: Kan du finde Opskriftshemmeligheder afsløres: Erstatningsmuligheder for salatprodukter "Kun 1 % af