ಜಾರ್ಖಂಡ್ನ ಧನ್ಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಜಾತ್ರೆಯಲ್ಲಿ ‘ಚಾಟ್ ಮಸಾಲಾ’ ಸೇವಿಸಿದ 80 ಜನರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ ಕರ್ಮತಾಂಡ್ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹುಚ್ಚುಕ್ತಂದಡ್ ಗ್ರಾಮದ ಜನರು ಭೋಕ್ತಾ ಜಾತ್ರೆ ಮುಗಿಸಿ ವಾಪಸಾದ ನಂತರ ಹೊಟ್ಟೆ ನೋವು ಮತ್ತು ವಾಂತಿ ಮಾಡಿಕೊಳ್ಳುಲು ಶುರುವಾಯ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರಲ್ಲಿ ಎಂಭತ್ತು ಮಂದಿಯ ಸ್ಥಿತಿ ಹದಗೆಟ್ಟಿದ್ದರಿಂದ ರಾತ್ರಿ 10:30 ರ ಸುಮಾರಿಗೆ ಶಾಹಿದ್ ನಿರ್ಮಲ್ ಮಹ್ತೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (SNMMCH) ದಾಖಲಿಸಲಾಗಿದೆ. ಒಂಬತ್ತು ವರ್ಷದ ಪಿಂಕಿ ಕುಮಾರಿ, ಹಿರಿಯ ವ್ಯಕ್ತಿ 44 ವರ್ಷ ವಯಸ್ಸಿನ ವಿಜಯ್ ಮಹತೋ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ.
ಎಮರ್ಜೆನ್ಸಿ ವಾರ್ಡ್ನಲ್ಲಿನ ಬೆಡ್ಗಳ ಕೊರತೆಯಿಂದಾಗಿ ಇಷ್ಟು ದೊಡ್ಡ ಸಂಖ್ಯೆಯ ರೋಗಿಗಳು ಒಟ್ಟಿಗೆ ಆಗಮಿಸಿದ್ದರಿಂದ ಕೆಲವರಿಗೆ ಆಸ್ಪತ್ರೆಯ ಇತರ ವಾರ್ಡ್ಗಳಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ರೋಗಿಗಳ ದಟ್ಟಣೆಯನ್ನು ನಿಭಾಯಿಸಲು ಹೆಚ್ಚುವರಿ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಯನ್ನು ಕರೆಯಲಾಗಿದೆ ಎಂದು ಅವರು ಹೇಳಿದರು.
ಆಸ್ಪತ್ರೆಗೆ ಭೇಟಿ ನೀಡಿದ ದಂದಬ್ ಸಿವಿಲ್ ಸರ್ಜನ್ ವೈದ್ಯ ಅಲೋಕ್ ವಿಶ್ವಕರ್ಮ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಫುಡ್ ಪಾಯ್ಸನ್ ನಿಂದ್ ಈ ರೀತಿ ಆಗಿರಬಹುದೆಂಬ ಶಂಕೆ ಇದೆ.