
ಚಾಂಡೇಲ್ ಜಿಲ್ಲಾಸ್ಪತ್ರೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿರೇನ್ ಸಿಂಗ್, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಸರ್ಕಾರವು ಜನರ ಜೀವವನ್ನು ಉಳಿಸಲು ಸಾಕಷ್ಟು ಶ್ರಮಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಮ್ಲಜನಕ ಘಟಕವನ್ನು ಸ್ಥಾಪನೆ ಮಾಡೋದಾಗಿ ಹೇಳಿದ್ರು.
DRDO ನೇಮಕಾತಿ: 10 ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಂದ ಅರ್ಜಿ ಆಹ್ವಾನ
ಅಂದಹಾಗೆ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಯಿಂದ ಸಿಎಂ ಬಿರೇನ್ ಸಿಂಗ್ ಪ್ರಚಲಿತವಾದ್ದಕ್ಕಿಂತ ಜಾಸ್ತಿ ಮನೆಯ ಟೆರೆಸ್ ಮೇಲೆ ನಿಂತು ಬಾಲಕನೊಬ್ಬ ಮಾಡಿದ ಉದ್ಘಾಟನಾ ಕಾರ್ಯಕ್ರಮದ ವರದಿಯ ಮೂಲಕ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿದೆ.
ಹೆಲಿಕಾಪ್ಟರ್ನಲ್ಲಿ ಸಿಎಂ ಬಿರೇನ್ ಸಿಂಗ್ ಬಂದಿಳಿಯಲಿದ್ದಾರೆ ಎಂಬ ವಿಚಾರವಾಗಿಯೇ ಉತ್ಸುಕನಾಗಿದ್ದ 7 ವರ್ಷದ ಬಾಲಕ ಆಮ್ಲಜನಕ ಘಟಕಗಳು ಹೇಗೆ ಮನುಷ್ಯನಿಗೆ ಉಪಕಾರಿ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾನೆ. ಮಾತ್ರವಲ್ಲದೇ ಸಿಎಂಗೂ ಧನ್ಯವಾದ ಅರ್ಪಿಸಿದ್ದಾನೆ.
ಬಾಲಕನ ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ ಬಿರೇನ್ ಸಿಂಗ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಬಾಲಕನ ಈ ವರದಿಯು ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.