alex Certify ರಾಮ ಜನ್ಮಭೂಮಿ ಟ್ರಸ್ಟ್​ ವಿರುದ್ಧ ಕೋಟಿಗಟ್ಟಲೇ ಅಕ್ರಮ ಭೂ ಅವ್ಯವಹಾರದ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮ ಜನ್ಮಭೂಮಿ ಟ್ರಸ್ಟ್​ ವಿರುದ್ಧ ಕೋಟಿಗಟ್ಟಲೇ ಅಕ್ರಮ ಭೂ ಅವ್ಯವಹಾರದ ಆರೋಪ

ಕೇಂದ್ರ ಸರ್ಕಾರ ರಚಿಸಿರುವ ರಾಮ ಮಂದಿರ ಟ್ರಸ್ಟ್​ ವಿರುದ್ಧ ಉತ್ತರ ಪ್ರದೇಶದ ಎರಡು ಪ್ರಮುಖ ವಿರೋಧ ಪಕ್ಷಗಳು ಭ್ರಷ್ಟಾಚಾರದ ಆರೋಪವನ್ನ ಹೊರಿಸಿವೆ.

ಈ ವರ್ಷದ ಮಾರ್ಚ್​ ತಿಂಗಳಲ್ಲಿ ಈ ಅವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷ ಹಾಗೂ ಆಮ್​ ಆದ್ಮಿ ಪಕ್ಷಗಳು ಆರೋಪ ಮಾಡಿವೆ. ಇಬ್ಬರು ರಿಯಲ್​ ಎಸ್ಟೇಟ್​​ ಡೀಲರ್​ಗಳು 2 ಕೋಟಿ ರೂಪಾಯಿಗೆ ಖರೀದಿಸಿದ ಆಸ್ತಿಯನ್ನ ಕೆಲವೇ ನಿಮಿಷಗಳಲ್ಲಿ ಟ್ರಸ್ಟ್​​ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆದರೆ ರಾಮ ಮಂದಿರ ಟ್ರಸ್ಟ್​ ವಿಪಕ್ಷಗಳ ಈ ಆರೋಪವನ್ನ ಸಂಪೂರ್ಣ ತಳ್ಳಿ ಹಾಕಿದೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವಾಗಲೇ ವಿಪಕ್ಷಗಳು ಹೊರಿಸಿರುವ ಈ ಆರೋಪ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸುಪ್ರೀಂ ಕೋರ್ಟ್​ ತೀರ್ಪನ್ನ ಆಧರಿಸಿ ರಾಮ ಮಂದಿರ ನಿರ್ಮಾಣ, ಮೇಲ್ವಿಚಾರಣೆ ಹಾಗೂ ನಿರ್ವಹಣೆಗಾಗಿ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರು ರಾಮ ಮಂದಿರ ಟ್ರಸ್ಟ್​ ರಚನೆ ಮಾಡಿದೆ. ಈ ಟ್ರಸ್ಟ್​​ನಲ್ಲಿ ಒಟ್ಟು 15 ಮಂದಿ ಸದಸ್ಯರಿದ್ದು ಅದರಲ್ಲಿ 12 ಮಂದಿಯನ್ನ ಕೇಂದ್ರ ಸರ್ಕಾರವೇ ಆಯ್ಕೆ ಮಾಡಿದೆ.

ಭಾನುವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಪವನ್​ ಪಾಂಡೆ, ಬಿಜೆಪಿ ಸ್ಥಳೀಯ ಮುಖಂಡರು ರಾಮ ಮಂದಿರ ಟ್ರಸ್ಟ್​ನ ಕೆಲ ಸದಸ್ಯರ ಸಹಕಾರದಿಂದ ಈ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಸಂಬಂಧ ಕೆಲ ದಾಖಲೆಗಳನ್ನೂ ಒದಗಿಸಿರುವ ಪವನ್​ ಪಾಂಡೆ ಇದರಲ್ಲಿ ಅಯೋಧ್ಯೆ ಮೇಯರ್​ ಹಾಗೂ ಟ್ರಸ್ಟ್​​ನ ಸದಸ್ಯರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಆಸ್ತಿಯ ಬೆಲೆ 2 ಕೋಟಿಯಿಂದ 18 ಕೋಟಿಗೆ ಏರಿಕೆಯಾಗಿದೆ ಅಂದರೆ ಆ ಭೂಮಿಯಲ್ಲೇನು ಚಿನ್ನ ಎಸೆಯಲಾಯಿತಾ..? ಅಂದರೆ ಇಲ್ಲಿ 16.5 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಈ ಪ್ರಕರಣದ ಸಂಬಂಧ ವಿಚಾರಣೆ ನಡೆಯಲೇಬೇಕು ಎಂದು ಹೇಳಿದ್ದಾರೆ.

ರಾಮ ಮಂದಿರ ಟ್ರಸ್ಟ್​ಗೆ ಜನರು ಕೋಟಿಗಟ್ಟಲೇ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆದರೆ ಜನದ ಕಷ್ಟದ ಹಣವನ್ನ ಈ ರೀತಿ ಬಳಕೆ ಮಾಡಿದ್ದೀರಾ ಅಂದರೆ ದೇಶದ 120 ಕೋಟಿ ಜನಕ್ಕೆ ನೀವು ಕೊಟ್ಟ ಗೌರವ ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಕೂಡ ಸುದ್ದಿಗೋಷ್ಠಿ ನಡೆಸಿ ರಾಮ ಮಂದಿರ ಟ್ರಸ್ಟ್​ ವಿರುದ್ಧ ಭೂ ಅವ್ಯವಹಾರದ ಆರೋಪ ಮಾಡಿದ್ದಾರೆ.

ಶ್ರೀರಾಮನ ಹೆಸರಲ್ಲಿ ಅವ್ಯವಹಾರ ಎಸಗುತ್ತಾರೆ ಅನ್ನೋದನ್ನ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಈ ದಾಖಲೆಗಳನ್ನ ನೋಡಿದ್ರೆ ಕೋಟಿಗಟ್ಟಲೇ ಅವ್ಯವಹಾರ ನಡೆದಿದೆ ಅನ್ನೋದು ಸ್ಪಷ್ಟ ಎಂದು ಹೇಳಿದ್ದಾರೆ

ಆದರೆ ಈ ಎಲ್ಲಾ ಆರೋಪಗಳನ್ನ ರಾಮಮಂದಿರ ಟ್ರಸ್ಟ್​ ತಳ್ಳಿ ಹಾಕಿದೆ. ಈ ರೀತಿಯ ಆರೋಪಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇರುತ್ತದೆ. ಹೀಗಾಗಿ ನಾವು ಇಂತಹ ಆರೋಪಗಳ ವಿರುದ್ಧ ತಲೆಕೆಡಿಸಿಕೊಳ್ಳೋದಿಲ್ಲ. ನೀವೂ ತಲೆಕೆಡಿಸಿಕೊಳ್ಳಬೇಡಿ ಎಂದು ಶ್ರೀರಾಮ ಮಂದಿರ ಟ್ರಸ್ಟ್​​ನ ಕಾರ್ಯದರ್ಶಿ ಹಾಗೂ ವಿಶ್ವ ಹಿಂದೂ ಪರಿಷತ್​ ನಾಯಕ ಚಂಪತ್​​ ರೈ ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ಟ್ವೀಟ್​ ಕೂಡ ಮಾಡಿರುವ ರೈ, ಈ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...