alex Certify ಹೆಜ್ಜೇನು ದಾಳಿಯಿಂದಾಗಿ ಪ್ರಾಣ ಬಿಟ್ಟ ನಿವೃತ್ತ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಜ್ಜೇನು ದಾಳಿಯಿಂದಾಗಿ ಪ್ರಾಣ ಬಿಟ್ಟ ನಿವೃತ್ತ ಅಧಿಕಾರಿ

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನಲ್ಲಿ ಹೆಜ್ಜೇನಿನ ದಾಳಿಯಿಂದಾಗಿ ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಇಂದು ಅಮವಾಸ್ಯೆ ಇರುವ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಯೊಬ್ಬರು ತಮ್ಮ ಮನೆಯ ಮುಂದೆ ವಾಹನ ಸ್ವಚ್ಛಗೊಳಿಸಿ, ನಂತರ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನು ದಾಳಿ ಮಾಡಿವೆ. ಈ ದಾಳಿಗೆ ಒಳಗಾಗಿದ್ದ ಪ್ರಭಾಕರ ಅತ್ತಿಗೇರಿ(6) ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಪ್ರಭಾಕರ್ ಅವರ ಮೇಲೆ ಹೆಜ್ಜೇನು ದಾಳಿ ಮಾಡುತ್ತಿದ್ದಂತೆ ಕಿರುಚಾಡಿ, ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ಸ್ಥಳೀಯರು ಹೆಜ್ಜೇನಿಗೆ ಭಯಪಟ್ಟು ಸಹಾಯಕ್ಕೆ ಮುಂದಾಗಿಲ್ಲ. ಹೆಜ್ಜೇನುಗಳು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಅವರ ಮೇಲೆ ದಾಳಿ ಮಾಡಿವೆ. ಆ ನಂತರ ಸ್ಥಳೀಯರು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Pavouk v domě: problém nebo řešení? Nejpozornější najdou psa mezi hračkami Bramborová kaše pečená ve fólii: Jak se vypořádat Загадка, которая доведет гения Test IQ: Musíte najít Nebývalý detektivní příběh: Fotografování iluzí: objevte Jen géniové