alex Certify ಹಿಂದಿ ಇಷ್ಟವಿಲ್ಲದವರು ದೇಶ ಬಿಟ್ಟು ತೊಲಗಲಿ ಎಂದ ಉತ್ತರ ಪ್ರದೇಶ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದಿ ಇಷ್ಟವಿಲ್ಲದವರು ದೇಶ ಬಿಟ್ಟು ತೊಲಗಲಿ ಎಂದ ಉತ್ತರ ಪ್ರದೇಶ ಸಚಿವ

ಖ್ಯಾತ ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರ ಭಾಷೆಯಲ್ಲವೆಂಬ ಸತ್ಯ ಹೇಳಿದ ಬಳಿಕ ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್, ಹಾಗಾದರೆ ರಾಷ್ಟ್ರ ಭಾಷೆಯಾಗಿರುವ ಹಿಂದಿಗೆ ನಿಮ್ಮ ಚಿತ್ರಗಳನ್ನು ಏಕೆ ಡಬ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು.

ಅಜಯ್ ದೇವಗನ್ ಟ್ವಿಟರ್ ಕಿಚ್ಚ ಸುದೀಪ್ ಸಖತ್ ತಿರುಗೇಟು ನೀಡಿದ್ದು, ನೆಟ್ಟಿಗರು ಸಹ ಬಾಲಿವುಡ್ ನಟ ಅಜಯ್ ದೇವಗನ್ ರ ಬೆವರಿಳಿಸಿದ್ದರು. ಜೊತೆಗೆ ಹಿಂದಿ ರಾಷ್ಟ್ರ ಭಾಷೆ ಎಂದು ಎಲ್ಲಿದೆ ಎಂದು ಪ್ರಶ್ನಿಸಿದ್ದರು.

ಈ ವಿವಾದ ಇನ್ನೂ ತಣ್ಣಗಾಗಿಲ್ಲದ್ದರ ಮಧ್ಯೆ ಉತ್ತರಪ್ರದೇಶದ ಸಚಿವರೊಬ್ಬರು ಇದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಮೀನುಗಾರಿಕೆ ಸಚಿವ ಸಂಜಯ್ ನಿಶಾದ್, ಸಂವಿಧಾನದಲ್ಲಿ ದೇಶವನ್ನು ಹಿಂದುಸ್ತಾನ ಎನ್ನಲಾಗಿದೆ. ಇದರ ಅರ್ಥ ಇದು ಹಿಂದಿ ಭಾಷಿಕರ ನಾಡು ಎಂದು. ಹೀಗಾಗಿ ಹಿಂದಿ ಇಷ್ಟವಿಲ್ಲದವರು ದೇಶಬಿಟ್ಟು ತೊಲಗಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...