alex Certify ಹಣ ಪಡೆದ ಆರೋಪ; CPI ಪಿ ಆರ್ ರಾಘವೇಂದ್ರ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಪಡೆದ ಆರೋಪ; CPI ಪಿ ಆರ್ ರಾಘವೇಂದ್ರ ಸಸ್ಪೆಂಡ್

ಬೀದರ್: ವ್ಯಕ್ತಿಯೋರ್ವರಿಂದ ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬೀದರ್ ಜಿಲ್ಲೆಯ ಭಾಲ್ಕಿ ಸಿಪಿಐ ಪಿ.ಆರ್.ರಾಘವೇಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಸಮವಸ್ತ್ರದಲ್ಲೇ ವ್ಯಕ್ತಿಯೊಬ್ಬರಿಂದ ಪಿ.ಆರ್. ರಾಘವೇಂದ್ರ ಹಣ ಪಡೆದಿದ್ದರು. ಹಣ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಬೀದರ್ ಎಸ್ ಪಿ ಡಿ.ಎಲ್.ನಾಗೇಶ್, ಹೆಚ್ಚುವರಿ ಎಸ್ ಪಿ ಗೋಪಾಲ್ ಎಂಬುವವರಿಗೆ ತನಿಖೆಗೆ ಆಡೇಶ ನೀಡಿದ್ದರು.

ಇದೀಗ ತನಿಖೆ ನಡೆಸಿ ವರದಿ ನೀಡಲಾಗಿದ್ದು, ಸಿಪಿಐ ರಾಘವೇಂದ್ರ ಅವರ ವಿರುದ್ಧದ ಆರೋಪ ಸಾಬೀತಾಗಿದ್ದು, ವರದಿ ಆಧರಿಸಿ ಕಲಬುರ್ಗಿ ಐಜಿಪಿ ಸಿಪಿಐ ರಾಘವೇಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...