alex Certify ಸ್ವಾಮೀಜಿಗಳು ಮದುವೆಯಾಗಿ ಮಠ ನಡೆಸಿಕೊಂಡು ಹೋಗುವುದು ಸೂಕ್ತ: ಪ್ರಣವಾನಂದ ಶ್ರೀ ಅಭಿಮತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾಮೀಜಿಗಳು ಮದುವೆಯಾಗಿ ಮಠ ನಡೆಸಿಕೊಂಡು ಹೋಗುವುದು ಸೂಕ್ತ: ಪ್ರಣವಾನಂದ ಶ್ರೀ ಅಭಿಮತ

ಕಳೆದ ಕೆಲವು ವರ್ಷಗಳಿಂದ ಕೆಲ ಸ್ವಾಮಿಗಳ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣಗಳು ಕೇಳಿ ಬರುತ್ತಿವೆ. ಬಿಡದಿಯ ಸ್ವಾಮಿ ನಿತ್ಯಾನಂದನಿಂದ ಆರಂಭವಾದ ಈ ವಿಚಾರ ನಿರಂತರವಾಗಿ ನಡೆದುಕೊಂಡು ಬಂದಿದೆ. ನಿತ್ಯಾನಂದನಿಗೂ ಮೊದಲು ಸಹ ಕೆಲ ಸ್ವಾಮೀಜಿಗಳ ವಿರುದ್ಧ ಅಪಸ್ವರ ಕೇಳಿ ಬಂದಿದ್ದು ಆದರೆ ಇಷ್ಟರಮಟ್ಟಿಗೆ ಪ್ರಚಾರವಾಗಿರಲಿಲ್ಲ.

ಇದೀಗ ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಈ ಕುರಿತಂತೆ ತಮ್ಮ ಅಭಿಮತ ವ್ಯಕ್ತಪಡಿಸಿದ್ದು, ನವದ್ವಾರಗಳ ಆಧಾರದಲ್ಲಿ ರೂಪಿತವಾಗಿರುವ ಪ್ರತಿಯೊಬ್ಬರ ಶರೀರದಲ್ಲಿ ಪ್ರಕೃತಿ ಸಹಜ ಕ್ರಿಯೆಗಳು ನಡೆಯಲೇಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಹೀಗಾಗಿ ಸ್ವಾಮೀಜಿಗಳು ಮದುವೆಯಾಗಿ ಸಂಸಾರದೊಂದಿಗೆ ಮಠ ನಡೆಸಿಕೊಂಡು ಹೋಗುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದು, ನಾನು ಪದ್ಧತಿ ಪ್ರಕಾರ ಮದುವೆಯಾಗಿ ಬಳಿಕ ಮಠಾಧೀಶನಾಗಿದ್ದೇನೆ. ಹೀಗಾಗಿ ನನಗೆ ಲೈಸೆನ್ಸ್ ಇದೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...