ಜೆಡಿಎಸ್ ನಲ್ಲಿ ಈ ಬಾರಿ ದೇವೇಗೌಡರ ಸೊಸೆಯಂದಿರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ. ರಾಮನಗರ ಕ್ಷೇತ್ರ ಪ್ರತಿನಿಧಿಸ್ತಿದ್ದ ಅನಿತಾ ಕುಮಾರಸ್ವಾಮಿಯವರು ಮಗನಿಗೆ ಕ್ಷೇತ್ರ ತ್ಯಾಗ ಮಾಡಿದ್ದು, ತಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.
ಆದರೆ ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದರು. ಆದರೆ ಕೊನೆ ಕ್ಷಣದಲ್ಲಿ ಹಾಸನ ಟಿಕೆಟ್ ಸ್ವರೂಪ್ ಪಾಲಾಯಿತು. ಈ ಮೂಲಕ ಅನಿತಾ ಕುಮಾರ ಸ್ವಾಮಿ ಮತ್ತು ಭವಾನಿ ರೇವಣ್ಣ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಿದ್ರೂ ಪ್ರಚಾರದ ಅಖಾಡದಲ್ಲಿ ತುಂಬಾ ಬ್ಯುಸಿಯಾಗಿರುವಂತೆ ಅವರ ಮಾವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಟಾಸ್ಕ್ ಕೊಟ್ಟಿದ್ದಾರೆ.
ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಪುತ್ರ ನಿಖಿಲ್ ಕುಮಾರ್ ನ ಗೆಲ್ಲಿಸುವಂತೆ ಅನಿತಾ ಕುಮಾರಸ್ವಾಮಿಯವರಿಗೆ ಸೂಚಿಸಿದ್ದು, ಹಾಸನದಲ್ಲಿ ಸ್ವರೂಪ್ ರನ್ನ ಗೆಲ್ಲಿಸುವ ಜವಾಬ್ದಾರಿಯನ್ನ ಭವಾನಿ ರೇವಣ್ಣನವರ ಹೆಗಲಿಗೆ ಹಾಕಿದ್ದಾರೆ.
ಸೊಸೆಯಂದಿರು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುವಂತೆ ದೇವೇಗೌಡ್ರು ಇಬ್ಬರಿಗೂ ಟಾಸ್ಕ್ ನೀಡಿದ್ದಾರೆ. ಈ ಮೂಲಕ ದೇವೇಗೌಡರು ಕುಟುಂಬದಲ್ಲಿ ಒಡಕಿಲ್ಲ ಎನ್ನುವ ಮೂಲಕ ಒಗ್ಗಟ್ಟು ಪ್ರದರ್ಶನವನ್ನ ಬಿಂಬಿಸುವ ತಂತ್ರ ಮಾಡಿರೋದು ಮೇಲ್ನೋಟಕ್ಕೆ ಗೊತ್ತಾಗಿದೆ.