alex Certify ಸುಂದರ್‌ ಬನ್‌ನಲ್ಲಿ ಹೆಚ್ಚಾಗುತ್ತಿದೆ ಹುಲಿಗಳ ಸಂಖ್ಯೆ: ಹಳ್ಳಿಗಳತ್ತ ಆಕ್ರಮಣ ಮಾಡುತ್ತಿದೆ ರಾಷ್ಟ್ರೀಯ ಪ್ರಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ್‌ ಬನ್‌ನಲ್ಲಿ ಹೆಚ್ಚಾಗುತ್ತಿದೆ ಹುಲಿಗಳ ಸಂಖ್ಯೆ: ಹಳ್ಳಿಗಳತ್ತ ಆಕ್ರಮಣ ಮಾಡುತ್ತಿದೆ ರಾಷ್ಟ್ರೀಯ ಪ್ರಾಣಿ

ಸುಂದರ್‌ಬನ್ ಪ್ರದೇಶದಲ್ಲಿ ರಾಯಲ್ ಬೆಂಗಾಲ್ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಹುಲಿಗಳು ಸ್ಥಳೀಯ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಕೂಡ ಹೆಚ್ಚಿವೆ.

ಚಂಡಮಾರುತಗಳಿಂದಾಗಿ ಸುಂದರ್‌ಬನ್‌ನ ಹುಲಿಗಳು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿವೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿನ ಮಾನವ-ಪ್ರಾಣಿಗಳ ಸಂಘರ್ಷಗಳ ಕುರಿತು ಸೆಂಟ್ರಲ್ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಈ ಅತಿಕ್ರಮಣಕ್ಕೆ ಪ್ರಮುಖ ಕಾರಣವೆಂದರೆ ಆಹಾರದ ಕೊರತೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಹುಲಿಗಳಿಗೆ ನೀರಿನ ಸಮಸ್ಯೆ ಎದುರಾಗಿರುವುದರಿಂದ ಹುಲಿಗಳು ಆಹಾರ ಅರಸಿ ಗ್ರಾಮಗಳಿಗೆ ನುಗ್ಗುತ್ತಿವೆ.

ಮೂರು ವರ್ಷಗಳ ಹಿಂದೆ, ಹುಲಿ ಗಣತಿ ನಡೆದಾಗ ಈ ಪ್ರದೇಶದಲ್ಲಿ ರಾಯಲ್ ಬೆಂಗಾಲ್ ಸಂಖ್ಯೆ 96 ಇತ್ತು ಎಂದು ಹೇಳಲಾಗಿದೆ. ಕಳೆದ ಮೂರು ತಿಂಗಳ ಹಿಂದೆ, ಹಳ್ಳಿಗಳಲ್ಲಿ ಆರು ಹುಲಿ ದಾಳಿಗಳು ನಡೆಸಿವೆ. ಈ ಸಂಬಂಧ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದಿದೆ. ಕೇಂದ್ರವು ವಿಸ್ತೃತ ತನಿಖೆ ನಡೆಸಿ ಹುಲಿಗಳ ಸಂಖ್ಯೆ ಹೆಚ್ಚಿರುವುದನ್ನು ಗಮನಕ್ಕೆ ತಂದಿದೆ.

ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಅರಣ್ಯ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಗ್ರಾಮಗಳಲ್ಲಿ ಬೇಲಿಯನ್ನು ನಿರ್ಮಿಸಲು ಸರ್ಕಾರ ಯೋಜಿಸಿದೆ. ಅಲ್ಲದೆ ರಾಜ್ಯ ಅರಣ್ಯ ಇಲಾಖೆಯು ರಾಯಲ್ ಬೆಂಗಾಲ್ ಹುಲಿಯನ್ನು ಸಂರಕ್ಷಿಸುವ ಗುರಿಯನ್ನು ಕೂಡ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...