alex Certify ಸಹೋದರಿ ಬಗ್ಗೆ ಅಸೂಯೆಪಟ್ಟುಕೊಂಡ ಉದ್ಯಮಿ ಆನಂದ್ ಮಹೀಂದ್ರಾ….! ಕಾರಣವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರಿ ಬಗ್ಗೆ ಅಸೂಯೆಪಟ್ಟುಕೊಂಡ ಉದ್ಯಮಿ ಆನಂದ್ ಮಹೀಂದ್ರಾ….! ಕಾರಣವೇನು ಗೊತ್ತಾ….?

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ವಿವಿಧ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಅವರು ತಮ್ಮ ಸಹೋದರಿಯ ಬಗ್ಗೆ ಅಸೂಯೆ ಪಟ್ಟುಕೊಂಡಿದ್ದಾಗಿ ಟ್ವೀಟ್ ಮಾಡಿದ್ದಾರೆ. ಅರೆ.. ಇಷ್ಟು ದೊಡ್ಡ ಉದ್ಯಮಿ ತಮ್ಮ ಸೋದರಿ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಂಡ್ರಾ ಅಂತಾ ಅಚ್ಚರಿಪಡುತ್ತಿದ್ದೀರಾ..? ಹಾಗಿದ್ದರೆ ಈ ಸ್ಟೋರಿ ಓದಿ.

ಹೌದು, ಉದ್ಯಮಿ ಮಹೀಂದ್ರಾ ಈ ಬಾರಿ ತಮ್ಮ ಟ್ವಿಟ್ಟರ್ ನಲ್ಲಿ ಹುಲಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಸಹೋದರಿ ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಬರೆದಿದ್ದಾರೆ. ಪೋಸ್ಟ್‌ನಲ್ಲಿ ಅವರು, ಈ ಚಿತ್ರಗಳು ತಮಗೆ ಅಸೂಯೆ ಪಡಿಸಿದವು ಎಂದು ಬರೆದಿದ್ದಾರೆ. ಆದರೆ, ಅದರ ಹಿಂದಿನ ಕಾರಣ ಕೇಳಿದ್ರೆ ಮಾತ್ರ ನಿಮ್ಮನ್ನು ನಗುವಂತೆ ಮಾಡುತ್ತದೆ.

ತಾನು ಬಾಲ್ಯದ ಬಹುಪಾಲು ರಜೆಯನ್ನು ನಾಗರಹೊಳೆ ಅಭಯಾರಣ್ಯದ ಬಳಿ ಕಳೆದಿರುವುದಾಗಿ ಮಹೀಂದ್ರಾ ತಿಳಿಸಿದ್ದಾರೆ. ಹಲವಾರು ಬಾರಿ ಅಲ್ಲಿಗೆ ಹೋಗಿದ್ದರೂ ಇನ್ನೂ ಹುಲಿಯನ್ನು ಅದರ ಆವಾಸಸ್ಥಾನದಲ್ಲಿ ನೋಡಿಲ್ಲ ಎಂದಿದ್ದಾರೆ. ಸಹೋದರಿ ತನಗೆ ಬಾಂಧವಗಢ ರಾಷ್ಟ್ರೀಯ ಉದ್ಯಾನವನದಿಂದ ಈ ಅದ್ಭುತ ಚಿತ್ರಗಳನ್ನು ಕಳುಹಿಸಿದ್ದಾಳೆ (ಫೋಟೋಗಳು: ಆಶಿಶ್ ಟಿರ್ಕಿ, ನ್ಯಾಚುರಲಿಸ್ಟ್). ಇದನ್ನು ನೋಡಿ ತಾನು ತುಂಬಾ ಅಸೂಯೆಪಟ್ಟಿದ್ದಾಗಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಈ ಫೋಟೋ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ನೆಟ್ಟಿಗರು ತಾವು ಸಫಾರಿಯಲ್ಲಿ ವೀಕ್ಷಿಸಿದ ಹುಲಿಗಳ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

— anand mahindra (@anandmahindra) April 14, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...