![](https://kannadadunia.com/wp-content/uploads/2022/11/27d60e31-d56b-4a3b-963f-2d6916b85cb3.jpg)
ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟಾನ್ ನಡುವಣ ಕಬ್ಬಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕೆಲವೇ ಅಂತರದಿಂದ ಸೋಲನುಭವಿಸಿದ್ದು, ನಂಬರ್ 1 ಸ್ಥಾನದಿಂದ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದೆ.
ಇಂದು ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದರೇ ಬೆಂಗಳೂರು ಬುಲ್ಸ್ ಮತ್ತೊಮ್ಮೆ 1ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ಇಂದು ರೈಡರ್ ಗಳ ದಿನ ಎಂದರೆ ತಪ್ಪಾಗಲಾರದು. ಬೆಂಗಳೂರಿನ ಭರತ್ ಹೂಡ ಹಾಗೂ ಬೆಂಗಾಲ್ ವಾರಿಯರ್ಸ್ ನ ಮಣಿಂದರ್ ಸಿಂಗ್ ಇವರಿಬ್ಬರೂ ಸೂಪರ್ 10 ಗಳಿಸುವ ಪ್ರಮುಖ ರೈಡರ್ ಗಳಾಗಿದ್ದಾರೆ
ಬೆಂಗಾಲ್ ವಾರಿಯರ್ಸ್ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಜಯದ ಹುಡುಕಾಟದಲ್ಲಿದೆ. ಬೆಂಗಾಲ್ ವಾರಿಯರ್ಸ್ ನ ಮಣಿಂದರ್ ಸಿಂಗ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಬೆಂಗಾಲ್ ವಾರಿಯರ್ಸ್ ನ ಡಿಪೆಂಡರ್ ಗಳ ಸಪೋರ್ಟ್ ಸಿಕ್ಕರೇ ಮಣಿಂದರ್ ಸಿಂಗ್ ಗೆ ತುಂಬಾ ಅನುಕೂಲವಾಗಲಿದೆ.