ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೀಗಾಗಿ ಅವರನ್ನು ಏಮ್ಸ್ಗೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ಮಂಡಳಿಯು ಲಾಲು ಯಾದವ್ರನ್ನು ಏಮ್ಸ್ಗೆ ದಾಖಲಿಸುವಂತೆ ಸಲಹೆ ನೀಡಿದೆ. ಅದರಂತೆ ಇಂದೇ ಲಾಲು ಪ್ರಸಾದ್ ಯಾದವ್ ರನ್ನು ಏಮ್ಸ್ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ಲಾಲು ಪ್ರಸಾದ್ ಯಾದವ್ರಿಗೆ ಚಿಕಿತ್ಸೆ ನೀಡಲು ರಿಮ್ಸ್ ರಚಿಸಿರುವ ಏಳು ಸದಸ್ಯರ ವೈದ್ಯರ ತಂಡದ ಮುಖ್ಯಸ್ಥ ಡಾ.ವಿದ್ಯಾಪತಿ , ಪ್ರಸಾದ್ ರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಏಮ್ಸ್ಗೆ ಶಿಫ್ಟ್ ಮಾಡುವಂತೆ ವೈದ್ಯಕೀಯ ಮಂಡಳಿಯು ಶಿಫಾರಸು ಮಾಡಿದ್ದೇವೆ. ಈ ಶಿಫಾರಸಿನ ಪ್ರತಿಯನ್ನು ನಾವು ಜೈಲಿನ ಸೂಪರಿಂಟೆಂಡೆಂಟ್ಗೆ ರವಾನಿಸಿದ್ದೇವೆ ಎಂದು ಹೇಳಿದರು.