alex Certify ಲಕ್ಷ್ಮಿ ‘ಸೈಕಲ್’ – ‘ಆನೆ’ ಮೇಲೆ ಕುಳಿತು ಬರೋದಿಲ್ಲ; ರಾಜನಾಥ್​ ಸಿಂಗ್ ವಿವಾದಾತ್ಮಕ ಹೇಳಿಕೆ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷ್ಮಿ ‘ಸೈಕಲ್’ – ‘ಆನೆ’ ಮೇಲೆ ಕುಳಿತು ಬರೋದಿಲ್ಲ; ರಾಜನಾಥ್​ ಸಿಂಗ್ ವಿವಾದಾತ್ಮಕ ಹೇಳಿಕೆ​

ಲಕ್ಷ್ಮೀ ದೇವಿಯು ‘ಸೈಕಲ್​’ ಅಥವಾ ‘ಆನೆ’ಯ ಮೇಲೆ ಮನೆಗೆ ಭೇಟಿ ನೀಡೋದಿಲ್ಲ. ಅಥವಾ ತನ್ನ ‘ಕೈ’ಗಳನ್ನು ಬೀಸಿ ತೋರಿಸುವುದಿಲ್ಲ. ಆಕೆಯು ಕೇವಲ ‘ಕಮಲ’ದ ಮೇಲೆ ಬರುತ್ತಾಳೆ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಟಾಂಗ್​ ನೀಡಿದ್ದಾರೆ.

ಗೋರಖ್​ಪುರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಾಜನಾಥ್​ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ರಾಜನಾಥ್​ ಸಿಂಗ್​, ಬಿಜೆಪಿ ಸರ್ಕಾರವು ಬಡವರಿಗೆ ವಾರ್ಷಿಕ 6 ಸಾವಿರ ರೂಪಾಯಿ, ಉಚಿತ ಪಡಿತರ, ಉಚಿತ ಮನೆಗಳನ್ನು ನೀಡಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಾಜನಾಥ್​ ಸಿಂಗ್​, ನಾವು ಸರ್ಕಾರ ರಚನೆ ಮಾಡಬೇಕೆಂದು ರಾಜಕೀಯ ಮಾಡುವವರಲ್ಲ. ನಾವು ಉತ್ತಮ ಸಮಾಜ ಹಾಗೂ ದೇಶವನ್ನು ಕಟ್ಟುವ ಸಲುವಾಗಿ ರಾಜಕೀಯ ಮಾಡುತ್ತೇವೆ. ಆದ್ದರಿಂದ ಬಿಜೆಪಿಯು ಎಂದಿಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯುವುದಿಲ್ಲ ಎಂದು ಹೇಳಿದರು.

ಚುನಾವಣೆಗಳು ಸಮೀಪಿಸಿದಾಗ ಎಲ್ಲಾ ರಾಜಕೀಯ ಪಕ್ಷಗಳು ಜನರಿಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಾರೆ. ಕಳೆದ 75 ವರ್ಷಗಳಲ್ಲಿ ನಾಯಕರು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದರೆ ಭಾರತವು 10-15 ವರ್ಷಗಳ ಹಿಂದೆಯೇ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವಾಗುತ್ತಿತ್ತು ಎಂದು ರಾಜನಾಥ್​ ಸಿಂಗ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kaip išsaugoti miltelius ir palaikyti švarią aplinką: kodėl verta Top 10 maisto produktų, kurie padeda Kenksmingos plaukų dažų sudėties pagrindinė 6 paprasti būdai, kaip išspręsti užsikimšusį klozetą per Kaip tinkamai dozuoti druską: patarimai dėl druskos kiekio ir Pagrindiniai žiedinių kopūstų privalumai: neįtikėtinos naudos