alex Certify ರೈತನ ಆತ್ಮಹತ್ಯೆ; ಹಗುರವಾಗಿ ಮಾತನಾಡಿ ವಿವಾದಕ್ಕೆ ಗುರಿಯಾದ ವಿಧಾನಸಭೆ ಮಾಜಿ ಅಧ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತನ ಆತ್ಮಹತ್ಯೆ; ಹಗುರವಾಗಿ ಮಾತನಾಡಿ ವಿವಾದಕ್ಕೆ ಗುರಿಯಾದ ವಿಧಾನಸಭೆ ಮಾಜಿ ಅಧ್ಯಕ್ಷ

ಹಾವೇರಿ: ಆತ್ಮಹತ್ಯೆಗೆ ಶರಣಾದ ರೈತನ ಬಗ್ಗೆ ಹಗುರವಾಗಿ ಮಾತನಾಡಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ವಿವಾದಕ್ಕೆ ಕಾರಣರಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ರೈತನಿಗೆ ಮಾಲೆ ಹಾಕಿ ಶ್ರದ್ಧಾಂಜಲಿ ಸಲ್ಲಿಸಲು ಬರುವಂತೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕೆ.ಬಿ.ಕೋಳಿವಾಡ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ರೈತ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೇನು ಮಾಡಕಾಗತ್ತೆ? ಸುಮ್ಮನೆ ಇಂತ ವಿಷಯವೆಲ್ಲ ತರ್ತಿರಾ. ನಾನೇನು ಉರುಳು ಹಾಕೋ ಅಂತಾ ಹೇಳಿದ್ನಾ? ಉರುಳು ಹಾಕ್ಕೊಂಡಾನ ಸತ್ತು ಹೋಗ್ಯಾನ ಅವನಿಗೇನು ಮಾಲಿ ಹಾಕ್ತೀರಿ…ಇಂತವೆಲ್ಲ ಬ್ಯಾಡ ಎಂದು ಕರೆ ಕಟ್ ಮಾಡಿದ್ದಾರೆ.

ಮಾಜಿ ಶಾಸಕರೂ ಆಗಿರುವ ಕೆ.ಬಿ.ಕೋಳಿವಾಡ ಅವರ ಈ ಸಂಭಾಷಣೆ ಆಡಿಯೋ ಇದೀಗ ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...