alex Certify ರಾಹುಲ್ ಗಾಂಧಿ ಕೇವಲ ಚುನಾವಣೆಗಾಗಿ ಹಿಂದೂ, ಹಿಂದುತ್ವ ಪದ ಬಳಕೆ ಮಾಡುತ್ತಾರೆ; ಕೇಂದ್ರ ಸಚಿವ ಎ. ನಾರಾಯಣಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿ ಕೇವಲ ಚುನಾವಣೆಗಾಗಿ ಹಿಂದೂ, ಹಿಂದುತ್ವ ಪದ ಬಳಕೆ ಮಾಡುತ್ತಾರೆ; ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ಲಖನೌ : ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿಗೆ ಹಿಂದೂತ್ವ ಅಂದರೆ ಏನು ಎನ್ನವುದೇ ಗೊತ್ತಿಲ್ಲ. ಅವರು ಹಿಂದೂ ಅಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ರಾಷ್ಟ್ರೀಯ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಹಿಂದುತ್ವ ಎಂದು ಹೇಳಿಕೊಳ್ಳುವವರು ರಾಜಕೀಯ ದುರಾಸೆಯಿಂದ ವರ್ತಿಸುತ್ತಿದ್ದಾರೆ. ಅವರಿಗೆ ಜನರ ಕಷ್ಟ, ಸುಖಗಳು ಬೇಕಾಗಿಲ್ಲ. ಅಧಿಕಾರ ಮಾತ್ರ ಬೇಕು. ಆದರೆ, ನಿಜವಾದ ಹಿಂದುಗಳು ಸತ್ಯಾಗ್ರಹ ನಂಬುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ.

ಹಿಂದುತ್ವ ಹಾಗೂ ಹಿಂದೂ ಎಂಬ ಮಾತುಗಳನ್ನು ಚುನಾವಣೆ ಸಂದರ್ಭಗಳಲ್ಲಿ ಮಾತ್ರ ರಾಹುಲ್ ಗಾಂಧಿ ಹೇಳುತ್ತಾರೆ. ಹಿಂದೂ ಹಾಗೂ ಹಿಂದುತ್ವದ ಬಗ್ಗೆ ರಾಹುಲ್ ಗಾಂಧಿಗೆ ಏನೂ ಗೊತ್ತಿಲ್ಲ. ಅವರಿಗೆ ದೇಶದಲ್ಲಿ ಏನು ನಡೆಯುತ್ತಿದೆ? ಜನರ ಸಮಸ್ಯೆಗಳೇನು? ಎಂಬುವುದೇ ತಿಳಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಕೇವಲ ಚುನಾವಣೆ ಉದ್ಧೇಶದಿಂದ ಹೇಳಿಕೆಗಳನ್ನು ನೀಡುತ್ತಾರೆಯೇ ಹೊರತು, ಜನರ ಸಮಸ್ಯೆಗಳಿಗೆ ಮರುಗಿ ಅಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...