alex Certify ರಾತ್ರಿ ಸುತ್ತಾಡುವವರನ್ನು ಪ್ರಶ್ನಿಸುವ ಅಧಿಕಾರ ಪೊಲೀಸರಿಗಿದೆ: ಬಾಂಬೆ ಹೈಕೋರ್ಟ್​ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಸುತ್ತಾಡುವವರನ್ನು ಪ್ರಶ್ನಿಸುವ ಅಧಿಕಾರ ಪೊಲೀಸರಿಗಿದೆ: ಬಾಂಬೆ ಹೈಕೋರ್ಟ್​ ಮಹತ್ವದ ಹೇಳಿಕೆ

ನೈಟ್​ ಔಟ್​​ ಹೋಗುವವರನ್ನು ತನಿಖೆ ನಡೆಸುವ ಎಲ್ಲಾ ಅಧಿಕಾರ ಪೊಲೀಸರಿಗೆ ಇದೆ ಎಂದು ಹೇಳುವ ಮೂಲಕ ಬಾಂಬೆ ಹೈಕೋರ್ಟ್​ ಕುಡುಕರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ದಾಖಲಿಸಿದ್ದ ಎಫ್​ಐಆರ್​​ನ್ನು ರದ್ದುಗೊಳಿಸಲು ನಿರಾಕರಿಸಿದೆ.

ವಿಲೇ​ ಪಾರ್ಲೆಯಲ್ಲಿ ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಮಾಡಲು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಸಬ್​ ಇನ್​ಸ್ಪೆಕ್ಟರ್​ 2019ರ ಫೆಬ್ರವರಿ 2ರಂದು ಕುಡಿದು ವಾಹನ ಚಲಾಯಿಸಿದ್ದವರ ವಿರುದ್ಧ ಎಫ್​ಐಆರ್​ ದಾಖಲಿಸುತ್ತಿದ್ದರು.

ಬೆಳಗ್ಗಿನ ಜಾವ 1:50ರ ಸುಮಾರಿಗೆ ಕುಡಿತದ ಅಮಲಿನಲ್ಲಿದ್ದ ಚಾಲಕನೊಬ್ಬ ಕಾರನ್ನು ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಅಂಧೇರಿ ಸೇತುವೆ ಬಳಿ ನಿಲ್ಲಿಸಿದ್ದ. ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿಯಿದ್ದ 2 ಕಾರುಗಳನ್ನು ಪೊಲೀಸರು ಗಮನಿಸಿದ್ದರು.

ಒಂದು ಕಾರಿನ ಚಾಲಕ ಕುಡಿತದ ಪರೀಕ್ಷೆಗೆ ಹಾಜರಾಗಲು ನಿರಾಕರಿಸಿ ಪೊಲೀಸರಿಗೆ ಲಂಚ ನೀಡಲು ಯತ್ನಿಸಿದ್ದ. ಆದರೆ ಪರೀಕ್ಷೆಯಲ್ಲಿ ಈತ ಕುಡಿದಿದ್ದು ದೃಢಪಟ್ಟಿದ್ದು ಮಾತ್ರವಲ್ಲದೇ ಆತನ ಬಳಿ ಲೈಸೆನ್ಸ್​ ಕೂಡ ಇರಲಿಲ್ಲ ಎನ್ನುವುದು ಪೊಲೀಸರು ಗಮನಕ್ಕೆ ಬಂದಿತ್ತು.

ಈ ಗುಂಪು ತನ್ನ ಫೋನುಗಳಿಂದ ವಿಡಿಯೋಗಳನ್ನು ಚಿತ್ರೀಕರಿಸಲು ಯತ್ನಿಸಿತು ಹಾಗೂ ದಂಡದ ರಶೀದಿ ಮೇಲೆ ಸಹಿ ಹಾಕಲೂ ಸಹ ನಿರಾಕರಿಸಿತ್ತು. ಈ ನಡುವೆ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ ಈ ಏಳು ಮಂದಿ ಪೊಲೀಸರನ್ನು ನಿಂದಿಸಿದ್ದಾರೆ. ಈ ಏಳು ಮಂದಿಯ ಮೇಲೆ ಪೊಲೀಸರು ಎಫ್​​ಐಆರ್​ ದಾಖಲಿಸಿದ್ದರು.

ಅರ್ಜಿದಾರರ ಪರ ಕೋರ್ಟ್​ಗೆ ಹಾಜರಾದ ವಕೀಲೆ ರೋಹಿಣಿ ವಾಘ್​​​ ಪೊಲೀಸರು ವಿಧಿಸಿರುವ ಐಪಿಸಿ ಸೆಕ್ಷನ್​​ಗಳ ಅಡಿಯಲ್ಲಿ ಕಕ್ಷಿದಾರರು ಯಾವುದೇ ಅಪರಾಧವನ್ನು ಎಸಗಿಲ್ಲ. ಅಲ್ಲದೇ ಅರ್ಜಿದಾರರು ಮದ್ಯ ಸೇವನೆ ಮಾಡಿಲ್ಲ. ಹಾಗೂ ಇವರ್ಯಾರೂ ಕ್ರಿಮಿನಲ್​ ಹಿನ್ನೆಲೆ ಉಳ್ಳವರಲ್ಲ ಎಂದು ವಾದಿಸಿದ್ದರು.

ಪೊಲೀಸರು ದಾಖಲಿಸಿರುವ ಎಫ್​ಐಆರ್​ ಹಾಗೂ ಸಾಕ್ಷ್ಯಗಳ ಹೇಳಿಕೆಗಳನ್ನು ಆಧರಿಸಿ ಬಾಂಬೆ ಹೈಕೋರ್ಟ್​ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ನಾವು ಗಮನಿಸಬೇಕಾದ ಅಂಶವಾಗಿದೆ. ಅಲ್ಲದೇ ಮದ್ಯಪಾನ ಮಾಡಿ ಚಾಲನೆ ಮಾಡುವವರನ್ನು ಪ್ರಶ್ನಿಸುವ ಅಧಿಕಾರ ಪೊಲೀಸರಿಗೆ ಇದೆ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...