alex Certify ರಜಾ ದಿನದಂದು ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಜಾ ದಿನದಂದು ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

ಭಾನುವಾರ ರಜಾ ದಿನವಾಗಿದ್ದ ಕಾರಣ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಉಸುಕಿನಲ್ಲಿ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಆಣೇಗೆರೆಯಲ್ಲಿ ನಡೆದಿದೆ.

ಪಂಚನಹಳ್ಳಿ ಹೋಬಳಿಯ ಬಿಟ್ಟೇನಹಳ್ಳಿ ಗ್ರಾಮದ 18ವರ್ಷದ ಕಿರಣ್, 17ವರ್ಷದ ರಾಕೇಶ್ ಮತ್ತು 16 ವರ್ಷದ ದರ್ಶನ್ ಮೃತಪಟ್ಟ ವಿದ್ಯಾರ್ಥಿಗಳಾಗಿದ್ದು, ಇವರುಗಳು ಭಾನುವಾರ ಮಧ್ಯಾಹ್ನ ಆಣೇಗೆರೆ ಕೆರೆಗೆ ಈಜಲು ತೆರಳಿದ್ದರು.

ಈ ವೇಳೆ 20 ಅಡಿ ಆಳದ ಉಸುಕಿನಲ್ಲಿ ಸಿಲುಕಿ ಮೃತಪಟ್ಟಿದ್ದು, ಬಳಿಕ ಮೂವರ ದೇಹಗಳನ್ನು ಹೊರ ತೆಗೆಯಲಾಯಿತು. ಮೃತದೇಹ ನೋಡುತ್ತಲೇ ಮೂವರು ವಿದ್ಯಾರ್ಥಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೆರೆ ಸುತ್ತ ನೆರೆದಿದ್ದ ನೂರಾರು ಮಂದಿ ಮಮ್ಮಲ ಮರುಗಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Najít kočku: vrcholový test pozornosti на Kde se skrývá autíčko: jen ti nejpozornější ho najdou Vynikající jemné Jak najít měsíc v koláčcích za 7 sekund: výzva